ತನಿಖೆ ನಡೆಯುತ್ತಿದ್ದು, ಈಗಲೇ ಉಗ್ರರು ಎಂದು ಹೇಳಲಾಗುವುದಿಲ್ಲ: ಡಾ.ಜಿ. ಪರಮೇಶ್ವರ್‌

ಐವರು ಶಂಕಿತ ಉಗ್ರರ ಬಗ್ಗೆ ತನಿಖೆ ನಡೆಯುತ್ತಿದೆ. ಈಗಲೇ ಉಗ್ರರು ಎಂದು ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.
 

First Published Jul 20, 2023, 11:41 AM IST | Last Updated Jul 20, 2023, 11:41 AM IST

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಶಂಕಿತ ಐವರು ಉಗ್ರರನ್ನು (Suspected terrorist) ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ (G Parameshwara) ಮಾತನಾಡಿದ್ದು,  ಈಗಲೇ ಅವರನ್ನು ಟೆರರಿಸ್ಟ್ ಅಂತಾ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈಗಲೇ ಉಗ್ರರು ಅಂತಾ ಹೇಳಲು ಸಾಧ್ಯವಿಲ್ಲ. ಐವರನ್ನು ಸಿಸಿಬಿಯವರು(CCB) ಬಂಧಿಸಿದ್ದಾರೆ. ಅವರಿಂದ 7 ಕಂಟ್ರಿಮೇಡ್‌ ಪಿಸ್ತೂಲ್‌, ವಾಕಿ ಟಾಕಿ, ಆಯುಧಗಳು ಸಿಕ್ಕಿವೆ. ಕಾರಾಗೃಹದಲ್ಲೇ ಸ್ಕೆಚ್‌ ಹಾಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ಐವರನ್ನು CCB ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮಾಡಿ ಟೆರರ್​ ಲಿಂಕ್​​ ಇದೆಯಾ ಅಂತಾ ನೋಡುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಮೈತ್ರಿಗೆ ತಾತ್ಕಾಲಿಕ ಬ್ರೇಕ್‌: ಜೆಡಿಎಸ್‌ನಲ್ಲೇ ವಿರೋಧ...ಬಿಜೆಪಿಯಲ್ಲೂ ಅಪಸ್ವರ..!