ಕಿಟ್ಟು ಪುಟ್ಟು To ಆಪ್ತಮಿತ್ರ.. ವಿಷ್ಣುವರ್ಧನ್-ದ್ವಾರಕೀಶ್ ಸ್ನೇಹದಲ್ಲಿ ಬಿರುಕು ಮೂಡಲು ಅದೊಂದೇ ಕಾರಣ!

ನಿರ್ಮಾಣ ಮಾಡಿದ್ದು 53.. 14 ಸಿನಿಮಾಗಳಲ್ಲಿ ವಿಷ್ಣುವರ್ಧನ್..! ಕಿಟ್ಟುಪುಟ್ಟ to ಆಪ್ತಮಿತ್ರ.. ಹೇಗಿತ್ತು ಆಪ್ತಮಿತ್ರರ ಬಾಂಧವ್ಯ..? ಬಿರುಕು ಮೂಡಿದ್ದಾದರೂ ಏಕೆ..? ದೂರ ಮಾಡಲು ಎಂದೂ ಆಗಲ್ಲ.. ಎನ್ನುತ್ತಿದ್ದವರ ಸ್ನೇಹದ ಕಥೆ..!

Share this Video
  • FB
  • Linkdin
  • Whatsapp

ನಿರ್ಮಾಣ ಮಾಡಿದ್ದು 53.. 14 ಸಿನಿಮಾಗಳಲ್ಲಿ ವಿಷ್ಣುವರ್ಧನ್..! ಕಿಟ್ಟುಪುಟ್ಟ to ಆಪ್ತಮಿತ್ರ.. ಹೇಗಿತ್ತು ಆಪ್ತಮಿತ್ರರ ಬಾಂಧವ್ಯ..? ಬಿರುಕು ಮೂಡಿದ್ದಾದರೂ ಏಕೆ..? ದೂರ ಮಾಡಲು ಎಂದೂ ಆಗಲ್ಲ.. ಎನ್ನುತ್ತಿದ್ದವರ ಸ್ನೇಹದ ಕಥೆ..! ಇದೇ ಈ ಕ್ಷಣದ ಎಪಿಸೋಡ್ ಆಪ್ತಮಿತ್ರರು..! ಕನ್ನಡದ ಕುಳ್ಳ, ಸ್ಯಾಂಡಲ್‌ವುಡ್‌ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವ್ರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.. ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ಕಳ್ಳ ಕುಳ್ಳ ಎಂದು ಪ್ರಖ್ಯಾತಿ ಪಡೆದಿದ್ದಂತಹ ಡಾಕ್ಟರ್ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಸ್ನೇಹ ಎಷ್ಟರ ಮಟ್ಟಿಗೆ ಬಲವಾಗಿತ್ತು ಎಂಬುದು ನಮ್ಮೆಲ್ಲರಿಗೂ ಗೊತ್ತೇ ಇದೆ. 

Add Asianetnews Kannada as a Preferred SourcegooglePreferred

ವಿಷ್ಣುವರ್ಧನ್ ದ್ವಾರಕೀಶ್ ಜೊತೆ ಬಹಳ ಮಧುರವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಹೀಗಿರುವಾಗ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಸ್ನೇಹದಲ್ಲಿ ಬಿರುಕು ಮೂಡಿತ್ತು.. ಹಾಗಾದ್ರೆ ವಿಷ್ಣು ದ್ವಾರಕೀಶ್ ನಡುವಿನ ಬಾಂಧವ್ಯ ಹೇಗಿತ್ತು..? ಆಪ್ತಮಿತ್ರ ನಂತರ ದ್ವಾರಕೀಶ್ ವಿಷ್ಣು ಜೊತೆ ಸಿನಿಮಾ ಮಾಡಲೇ ಇಲ್ಲ.. ಆದ್ರೆ ವಿಷ್ಣು ಜೊತೆ ಇನ್ನೂ ಸಿನಿಮಾ ಮಾಡ್ಬೇಕಿತ್ತು ಅಂತ ದ್ವಾರಕೀಶ್ ಹೇಳ್ಕೊಂಡಿದ್ರು. ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವ್ರ ಸ್ನೇಹ ಸಂಭಂದ ತುಂಬಾ ಚೆನ್ನಾಗಿತ್ತು.. ಈ ಜೋಡಿ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಆಗ್ತಿತ್ತು.. ಆದ್ರೆ ಇಬ್ಬರ ಮಧ್ಯೆ ಬಿರುಕುಂಟಾಗಿ ನಂತರ ಇವ್ರಿಬ್ಬರು ಒಂದಾಗಿದ್ದು 5 ವರ್ಷಗಳ ಬಳಿಕ. ದ್ವಾರಕೀಶ್ ಅವ್ರು ನಿರ್ಮಾಣ ಮಾಡಿದ 53 ಸಿನಿಮಾಗಳ ಪೈಕಿ 14 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ.. ಅವುಗಳಲ್ಲಿ ಬಹುತೇಕ ಸಿನಿಮಾಗಳು ಈ ಆಪ್ತಮಿತ್ರರಿಗೆ ಸಕ್ಸಸ್ ತಂದು ಕೊಟ್ಟಿವೆ.

Related Video