ಕೋಲುಮಂಡೆ; 'ಅಶ್ಲೀಲ ಎನ್ನುವುದು ನೋಡುವವರ ಯೋಚನೆಯಲ್ಲಿದೆ'
'ಕೋಲುಮಂಡೆ' ಹಾಡಿನ ವಿವಾದದ ಬಗ್ಗೆ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಮಾತು/ ನಮಗಿಷ್ಟ ಆಗಿದ್ದು ಬೇರೆಯವರಿಗೆ ಇಷ್ಟ ಆಗದೇ ಇರಬಹುದು/ ಕಲಾವಿದನ ಹಕ್ಕು ಕಿತ್ತುಕೊಳ್ಳುವ ಕೆಲಸ ಮಾಡಬಾರದು/ ಮೂಲ ಆಶಯ ಬಿಂಬಿಸುವ ಕೆಲಸ ನಡೆಯುತ್ತಿರಬೇಕು
ಬೆಂಗಳೂರು(ಆ. 25) 'ಕೋಲುಮಂಡೆ' ಹಾಡಿನ ವಿವಾದದ ಬಗ್ಗೆ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಮಾತನಾಡಿದ್ದಾರೆ. ನಮಗಿಷ್ಟ ಆಗಿದ್ದು ಬೇರೆಯವರಿಗೆ ಇಷ್ಟ ಆಗದೇ ಇರಬಹುದು. ಅಲ್ಲಮ ಸಿನಿಮಾ ಕೂಡ ವಿವಾದ ಆಗಿತ್ತು.. ವಿರೋಧ ವ್ಯಕ್ತಪಡಿಸಿದ್ದರು ಎಂದು ಹಳೆಯ ಘಟನೆಗಳನ್ನು ತಿಳಿಸಿದರು.
ಸಾಂಗ್ ಬಗ್ಗೆ ಚಂದನ್ ಕೊನೆಯದಾಗಿ ಹೇಳಿದ್ದೇನು?
ಆಗ ನನ್ನ ಜೊತೆ ಯಾರೂ ನಿಲ್ಲಲೇ ಇಲ್ಲ. ಕಲಾವಿದನ ಹಕ್ಕು ಕಿತ್ತುಕೊಳ್ಳೋಕೆ ಯಾರಿಂದಲೂ ಸಾಧ್ಯ ಇಲ್ಲ. ಇಷ್ಟ ಆದರೆ ನೋಡಿ ಇಷ್ಟ ಆಗಲಿಲ್ಲದಿದ್ದರೆ ನೋಡಬೇಡಿ. ಅಶ್ಲೀಲ ಅನ್ನೋನು ನಿಮ್ಮ ಯೋಚನೆಗೆ ಬಿಟ್ಟಿದ್ದು. ಅಭಿಪ್ರಾಯ ಹೇಳೋಕೆ ಮಾತ್ರ ಸಾಧ್ಯ, ಅದನ್ನ ಬಿಟ್ಟು ಮಾಡಿದ್ದನ್ನ ತೆಗೆಯಿರಿ ಅಂತ ಹೇಳೋಕೆ ಸಾಧ್ಯ ಇಲ್ಲ ಒಬ್ಬ ಕಲಾಕಾರನಿಗೆ ತೊಂದರೆ ನೀಡುವ ಕೆಲಸ ಮಾಡಬಾರದು ಎಂದಿದ್ದಾರೆ.