ಚಾಮುಂಡೇಶ್ವರಿ ಆಶೀರ್ವಾದ ಪಡೆದ ಕಿಚ್ಚ? ತಾಯಿ ಸನ್ನಿಧಿಯಲ್ಲಿ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್..!

ನಟ ಕಿಚ್ಚ ಸುದೀಪ್‌ ಮೈಸೂರಿನ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ನಟನ ನೋಡಲು ಫ್ಯಾನ್ಸ್‌ ಮುಗಿಬಿದ್ದಿದ್ದರು.
 

First Published May 29, 2024, 9:31 AM IST | Last Updated May 29, 2024, 9:32 AM IST

ಸ್ಯಾಂಡಲ್‌ವುಡ್‌ನ ಬಾದ್ ಷಾ ಕಿಚ್ಚ ಸುದೀಪ್(Sudeep) ಈಗ ಫುಲ್ ಫ್ರೀ. ಯಾಕಂದ್ರೆ ಕಿಚ್ಚನ ಮ್ಯಾಕ್ಸ್ ಸಿನಿಮಾ(Max Movie) ಶೂಟಿಂಗ್ ಮುಗಿದಿದೆ. ಡಬ್ಬಿಂಗ್ ಆಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಸಲ ಶುರುವಾಗಿದೆ. ಹೀಗಾಗಿ ಸುದೀಪ್ ಹೋಟೆಲ್ ಇನಾಗ್ರೇಷನ್, ಯಕ್ಷಪಟ್ಲ ಸಂಭ್ರಮ ಅಂತ ಖಾಸಗಿ ಕಾರ್ಯಕ್ರಮಳಿಗೆ ಗೆಸ್ಟ್ ಆಗಿ ಹೋಗುತ್ತಿದ್ದಾರೆ. ಇದರ ಮಧ್ಯೆ ಸುದೀಪ್ ಮೈಸೂರಿನ(Mysore) ಚಾಮುಂಡೇಶ್ವರಿ(Chamundeshwari) ಸನ್ನಿಧಿಗೂ ಹೋಗಿ ಬಂದಿದ್ದಾರೆ. ಭಾರತೀಯ ಚಿತ್ರರಂಗದ ಆರಡಿ ಕಟೌಟ್ ಸುದೀಪ್ ಚಾಮುಂಡೇಶ್ವರಿ ಭಕ್ತ. ಆಗಾಗ ಚಾಮುಂಡಿ ಬೆಟ್ಟ ಹತ್ತೋ ಕಿಚ್ಚ ದೇವಿ ದರ್ಶನ ಪಡೆದು ಧನ್ಯರಾಗುತ್ತಾರೆ. ಈಗ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಮುಗಿದು ಫ್ರೀ ಆಗಿರೋ ಸುದೀಪ್ ಯಾರಿಗೂ ಗೊತ್ತಾಗದ ಹಾಗೆ ಪತ್ನಿ ಪ್ರಿಯಾ ಜೊತೆ ದೇವಸ್ಥಾನಕ್ಕೆ ಕಿಚ್ಚ ಹೋಗಿದ್ರು. ಆದ್ರೆ ಸುದೀಪ್ ಬರುತ್ತಾರೆ ಅಂತ ಸುದ್ದಿ ಅದ್ ಹೇಗೆ ಲೀಕ್ ಆಯ್ತೋ ಗೊತ್ತಿಲ್ಲ. ಕಿಚ್ಚನ ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ರು. ಕೊನೆಗೆ ಕಿಚ್ಚ ಹರ ಸಾಹಸ ಮಾಡಿ ಅಭಿಮಾನಿಗಳ ಕಣ್ಣು ತಪ್ಪಿಸಿಕೊಂಡು ಬರಬೇಕಾಯ್ತು. ನಟ ದರ್ಶನ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಈಗ ಸಿನಿ ಪ್ರೇಕ್ಷಕ ಕಾಯುತ್ತಿರೋದು ಕಿಚ್ಚನ ಸಿನಿ ಅಪ್ಡೇಟ್ಗಾಗಿ ಯಾಕಂದ್ರೆ ಸುದೀಪ್ರ ಮ್ಯಾಕ್ಸ್ ವರ್ಕ್ ಮುಗಿದಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡಬೇಕಿದೆ. ಅದನ್ನ ವೇರಿ ಶಾರ್ಟ್ಲಿ ಅನೌನ್ಸ್ ಸುದೀಪ್ ಅನೌನ್ಸ್ ಮಾಡುತ್ತಾರೆ. ಅದಕ್ಕೂ ಮೊದಲೇ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಬಂದಿದ್ದಾರೆ ಬಾದ್ ಷಾ.

ಇದನ್ನೂ ವೀಕ್ಷಿಸಿ:  ರೈತರ ನೋವನ್ನ ಕೇಳುವ ಕೃಷಿ ಸಚಿವರೇ ಎಲ್ಲಿದ್ದಿರಪ್ಪಾ..! ಗ್ಯಾರಂಟಿ ಕೊಟ್ಟು..ಸುಲಿಗೆ ಮಾಡ್ತಿದೆಯಾ ರಾಜ್ಯ ಸರ್ಕಾರ..?

Video Top Stories