
'ಧಮಾಕ' ಪ್ರಚಾರದಲ್ಲಿ 'ಕಾಂತಾರ' ಬಗ್ಗೆ ಶ್ರೀಲೀಲಾ ಮಾತು: ಕನ್ನಡಿಗರ ಮನ ಗೆದ್ದ 'ಕಿಸ್' ಚೆಲುವೆ
ನಟಿ ಶ್ರೀಲೀಲಾ ಕನ್ನಡ ಚಿತ್ರರಂಗ ಮರೆತ್ರು ಅಂತ ಇತ್ತೀಚಿಗೆ ಟಾಕ್ ಶುರುವಾಗಿತ್ತು. ಆದ್ರೆ ಈಗ 'ಕಿಸ್' ಬೆಡಗಿ 'ಚಂದನವನ'ವನ್ನು ಕೊಂಡಾಡಿ ಭೇಷ್ ಎನಿಸಿಕೊಂಡಿದ್ದಾರೆ.
ನಟಿ ಶ್ರೀಲೀಲಾ ತೆಲುಗಿನ ತನ್ನ ಎರಡನೇ ಸಿನಿಮಾ ಧಮಾಕ ಪ್ರಚಾರದಲ್ಲಿ ಸ್ಯಾಂಡಲ್ ವುಡ್'ನ್ನು ಕೊಂಡಾಡಿದ್ದಾರೆ. ಧಮಾಕ ಸಿನಿಮಾ ಪ್ರಚಾರದ ಮೇಳೆ ‘ಕಾಂತಾರ’ ಸಿನಿಮಾ ಬಗ್ಗೆ ಮಾತನಾಡಿರೋ ಶ್ರೀಲೀಲಾ, ‘ನಾನು ಕಾಂತಾರ ನೋಡಿದ್ದೇನೆ. ಸಿನಿಮಾ ಅದ್ಭುತವಾಗಿದೆ. ನಾನು ಕರ್ನಾಟಕದವಳು. ಕನ್ನಡ ಸಿನಿಮಾಗಳ ವ್ಯಾಪ್ತಿ ಹೆಚ್ಚುತ್ತಿರೋ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ. ಶ್ರೀಲೀಲಾ ಆಡಿರೋ ಈ ಮಾತುಗಳು ಕನ್ನಡಿಗರ ಮನಸ್ಸು ಗೆಲ್ಲುತ್ತಿದೆ.