Asianet Suvarna News Asianet Suvarna News

ನಾವು ವಿದ್ಯೆ ಇಲ್ಲದೆ ಹೀರೋ ಆದ್ವಿ, ನೀವು ವಿದ್ಯಾವಂತ ಹೀರೋಗಳಾಗಿ; ದುನಿಯಾ ವಿಜಯ್

ನಟ ದುನಿಯ ವಿಜಯ್ ಮಾತನಾಡಿ ಟ್ರೈಲರ್ ರಿಲೀಸ್ ಈವೆಂಟ್ ತುಂಬ ಭಾವನಾತ್ಮಕವಾಗಿತ್ತು ಎಂದಿದ್ದಾರೆ. ನಮಗೆ ಯಾರು ಗುರು ಇರ್ಲಿಲ್ಲ, ಗುರು ಅನ್ನೋದೆ ಗೊತ್ತಿಲ್ಲ. ಆದರೆ ನಿಮಗೆಲ್ಲ ಗುರು ಸಿಕ್ಕಿದ್ದಾರೆ, ನಿಮಗೆ ಸೋಲಿಲ್ಲ ಎಂದು ಹೇಳಿದರು. 
 

ಸ್ಯಾಂಡಲ್‌ವುಡ್‌ನಲ್ಲಿ ಈಗ ಗುರುಶಿಷ್ಯರದ್ದೆ ಹವಾ. ಯಾರದು ಅದು ಅಂತೀರಾ ಗುರು ಶಿಷ್ಯರು ಸಿನಿಮಾದ ಬಗ್ಗೆ ಹೇಳುತ್ತಿರುವುದು. ಹೌದು, ಈ ಸಿನಿಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಈ ಬಾರಿ ಗುರು ಶಿಷ್ಯರಾಗಿ ತೆರೆಮೇಲೆ ಬರ್ತಿದ್ದಾರೆ ಕಾಮಿಡಿ ಅಧ್ಯಕ್ಷ ಶರಣ್. ಸದ್ಯ ಗುರು ಶಿಷ್ಯರು ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಬಿಡಗಡೆಯಾದ ಗುರುಶಿಷ್ಯರು ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಕಿಡ್ಸ್ ಕೂಡ ನಟಿಸಿದ್ದಾರೆ. ಶರಣ್ ಜೊತೆ ಪುತ್ರ, ನೆನಪಿರಲಿ ಪ್ರೇಮ್ ಪುತ್ರ, ರವಿಶಂಕರ್ ಪುತ್ರ ಸೇರಿದಂತೆ ಅನೇಕ ಸ್ಟಾರ್ ಕಿಡ್ಸ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖೋ ಖೋ ಆಟದ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಈ ಸಿನಿಮಾದ ಬಗ್ಗೆ ಮಾತನಾಡಿದ ನಟ ದುನಿಯ ವಿಜಯ್ ಟ್ರೈಲರ್ ರಿಲೀಸ್ ಈವೆಂಟ್ ತುಂಬ ಭಾವನಾತ್ಮಕವಾಗಿತ್ತು ಎಂದಿದ್ದಾರೆ. ನಾವು ಅನುಭವಿಸಿದ ಕಷ್ಟ ಮಕ್ಕಳಿಗೆ ಬರುವುದು ಬೇಡ ಎಂದೇ ದೇವರು ಈ ಸಿನಿಮಾ ನೀಡಿದ್ದಾರೆ. ರಿಲೀಸ್ ಆದ್ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ನಮಗೆ ಯಾರು ಗುರು ಇರ್ಲಿಲ್ಲ, ಗುರು ಅನ್ನೋದೆ ಗೊತ್ತಿಲ್ಲ. ಆದರೆ ನಿಮಗೆಲ್ಲ ಗುರು ಸಿಕ್ಕಿದ್ದಾರೆ, ನಿಮಗೆ ಸೋಲಿಲ್ಲ ಎಂದು ಹೇಳಿದರು. 

Video Top Stories