Darshan Thoogudeepa: ಚಂದ್ರನಿಗೆ ಹಿಡಿದ ಗ್ರಹಣ ಬಿಟ್ಟಾಯ್ತು, ನಟ ದರ್ಶನ್​ಗೆ ಹಿಡಿದಿರುವ ಗ್ರಹಣ ಬಿಡೋದು ಯಾವಾಗ?

ಚಂದ್ರನಿಗೆ ಹಿಡಿದ ಗ್ರಹಣ ಬಿಟ್ಟಿದೆ. ಆದ್ರೆ ದರ್ಶನ್​ಗೆ ಹಿಡಿದಿರುವ ಗ್ರಹಣ ಸದ್ಯಕ್ಕಂತೂ ಬಿಡುವ ಸೂಚನೆ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಚಕ್ರವರ್ತಿಯಂತೆ ಮೆರೀತಾ ಇದ್ದ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಲಾಂಕೆಟ್, ಬೆಡ್​ಶೀಟ್ ಗಾಗಿ ಪರದಾಡುವ ಸ್ಥಿತಿ ಬರುತ್ತೆ ಅಂದ್ರೆ ಅದು ಗ್ರಹಣವೇ ತಾನೆ. 

Share this Video
  • FB
  • Linkdin
  • Whatsapp

ಈಗಲೇ ಇಷ್ಟು ಪರದಾಡ್ತಾ ಇರೋ ದಾಸನಿಗೆ ಬಳ್ಳಾರಿಗೆ ಶಿಫ್ಟ್ ಆಗೋ ಭೀತಿ ಬೇರೆ ಕಾಡ್ತಿದೆ. ದರ್ಶನ್ ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಅತ್ಯಂತ ಜನಪ್ರೀಯ ತಾರೆ ಪಟ್ಟ ಪಡೆದಾತ. ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿರೋ ನಟ. ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯೋ ಸಿರಿವಂತ. ಆದ್ರೆ ಈ ಸಿರಿಯನ್ನ ಅನುಭಸಿಸೋ ಯೋಗ ಮಾತ್ರ ದರ್ಶನ್​​ಗಿಲ್ಲ. ಕಾಟೇರ ಸಿನಿಮಾ ಅಷ್ಟು ದೊಡ್ಡ ಯಶಸ್ಸು ಕಂಡು ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ದಾಸನ ಬದುಕಿಗೆ ಗ್ರಹಣ ಹಿಡಿದುಬಿಟ್ಟಿದೆ.

Related Video