Asianet Suvarna News Asianet Suvarna News

ಅವಿವಾ ಮುದ್ದೆ ತಿನ್ನೋದು ಡೌಟು, ಬಿರಿಯಾನಿ ಸಖತ್‌ ಆಗಿ ತಿಂತಾರೆ : ನಟ ಅಭಿಷೇಕ್‌

ಮಾಧ್ಯಮದವರ ಮೂಲಕ ಎಲ್ಲಾರಿಗೂ ಬೀಗರ ಔತಣಕೂಟಕ್ಕೆ ಸ್ವಾಗತವನ್ನು ಕೋರುತ್ತೇನೆ. ಎಲ್ಲಾರು ಬಂದು ಊಟ ಮಾಡಿ ಎಂದು ಅಭಿಷೇಕ್‌ ಹೇಳಿದರು.

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ವಿವಾಹವು ಜೂನ್ 5ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಶುಕ್ರವಾರ ಮಂಡ್ಯದಲ್ಲಿ ಬೀಗರ ಔತಣಕೂಟವನ್ನು ಏರ್ಪಡಿಸಲಾಗಿದೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ 15 ಎಕರೆ ಪ್ರದೇಶದಲ್ಲಿ ಬೀಗರ ಔತಣ ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಮಾರು 50 ಸಾವಿರ ಜನ ಬರುವ ನಿರೀಕ್ಷೆ ಇದೆ. ಔತಣಕೂಟದ ಸ್ಥಳಕ್ಕೆ ಆಗಮಿಸಿದ ನಟ ಅಭಿಷೇಕ್‌ ಅಂಬರೀಶ್‌ ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗಾಗಲೇ ತುಂಬಾ ಜನ ಆಗಮಿಸಿದ್ದಾರೆ. ಇಷ್ಟು ಜನರನ್ನು ಅವಿವಾ ಜೀವನದಲ್ಲಿ ನೋಡಿರಲಿಲ್ಲ. ಅವರು ಹೆದರಿಕೊಂಡಿದ್ದಾರೆ. ಮೆನು ಕಾರ್ಡ್‌ನಲ್ಲಿ ಅಂಬರೀಷ್‌ ಅವರಿಗೆ ಇಷ್ಟವಾದದನ್ನೇ ಸೇರಿಸಲಾಗಿದೆ. ಇಂದು ನಾನು ರಾಜಕೀಯ ವಿಚಾರವನ್ನು ಮಾತನಾಡುವುದಿಲ್ಲ ಎಂದು ನಟ ಅಭಿಷೇಕ್ ಅಂಬರೀಶ್‌ ಹೇಳಿದರು. 

ಇದನ್ನೂ ವೀಕ್ಷಿಸಿ: ಸಕ್ಕರೆ ನಾಡಿನಲ್ಲಿ ಅಕ್ಕರೆಯ ಅಭಿ-ಅವಿವಾ ಬೀಗರೂಟ: ಇಂದು ಅಂಬಿ ಫ್ಯಾನ್ಸ್‌ಗೆ ಭರ್ಜರಿ ಬಾಡೂಟ!