userpic
user icon

ಆಕೆಗೆ 13 ವರ್ಷ, ಆತ ಡ್ರೈವರ್; ಇಬ್ಬರ ಪ್ರೀತಿಗೆ ಕೊಳ್ಳಿ ಇಟ್ಟವರಾರು?

Sathish Kumar KH  | Updated: Apr 18, 2025, 8:09 PM IST

ಅವಳು 8ನೇ ಕ್ಲಾಸ್. ಅವನು ಡ್ರೈವರ್. ಇಬ್ಬರಿಗೂ ಲವ್ ಆಗಿತ್ತು. 6 ವರ್ಷದ ಅವರಿಬ್ಬರ ಲವ್ ಬಗ್ಗೆ ಇಡೀ ಊರಿಗೇ ಗೊತ್ತಿತ್ತು. ಹುಡುಗಿ ಹೆತ್ತವರು ಹುಡುಗನಿಗೆ ವಾರ್ನ್ ಕೂಡ ಮಾಡಿದ್ದರು. ಏನೇ ಆದರೂ ಅವಳು ನನಗೆ ಬೇಕು ಅಂತ ಕೂತಿದ್ದ. ಅವಳೂ ಕೂಡ ಅವನ ಜೊತೆಯೇ ನನ್ನ ಬದುಕು ಅಂದಿದ್ದಳು. ಆದರೆ ಯಾವಾಗ ಹೆತ್ತವರು ವಿರೋಧಿಸಿದರೋ ಆಗ 18 ವಯಸ್ಸು ಆಗುವವರೆಗೂ ಅವರಿಬ್ಬರೂ ಕಾದಿದ್ದರು. ಅಂದುಕೊಂಡಂತೆ ಇಬ್ಬರೂ ವಯಸ್ಸಿಗೆ ಬಂದ ಮೇಲೆ ಸೈಲೆಂಟಾಗಿ ರಿಜಿಸ್ಟರ್ ಮ್ಯಾರೇಜ್ ಆಗಿ ಊರು ಬಿಟ್ಟಿದ್ದರು. ಆದರೆ, ಇವತ್ತು ಆ ಹುಡುಗ ನನ್ನ ಹುಡುಗಿಯನ್ನ ನನಗೆ ಕೊಡಿಸಿ ಅಂತ ಕಂಡ ಕಂಡವರ ಬಳಿ ಅಂಗಲಾಚುತ್ತಿದ್ದಾನೆ. ಅಷ್ಟಕ್ಕೂ ಮದುವೆಯಾಗಿ ಹೋದವರಿಗೆ ಏನಾಯ್ತು.? ಇವತ್ತು ಹುಡುಗ ಬಂದು ಹೀಗೆ ಗೊಗರಿಯುತ್ತಿರೋದಾದ್ರೂ ಯಾಕೆ.? ಒಂದು ಸಿಂಪಲ್ ಲವ್ ಸ್ಟೋರಿಯ ಟ್ರಾಜಿಡಿ ಕಥೆಯೇ ಇವತ್ತಿನ ಎಫ್.ಐ.ಆರ್.

ನಿನ್ನೆ ನಮ್ಮ ಕಛೇರಿಗೆ ಒಂದು ಫೋನ್ ಕಾಲ್ ಬಂದಿತ್ತು. ಮಾಡಿದವನು ಈತನೇ.. ಸರ್.. ನಾನು ರಮೇಶ ಅಂತ. ನನ್ನ ಹೆಂಡತಿಯನ್ನ ಅವರ ಹೆತ್ತವರು ಕರೆದುಕೊಂಡು ಹೋಗಿಬಿಟ್ಟಿದ್ದಾರೆ. ಆಕೆ ಎಲ್ಲಿದ್ದಾಳೆ ಗೊತ್ತಿಲ್ಲ ಸರ್. ಪೊಲೀಸ್ ಠಾಣೆಯಲ್ಲೂ ನನಗೆ ನ್ಯಾಯ ಸಿಗ್ತಿಲ್ಲ. ದಯವಿಟ್ಟು ನೀವಾದ್ರೂ ನನಗೆ ನ್ಯಾಯ ಕೊಡಿಸಿ ಅಂದಿದ್ದ. ನಾವು ಆಯ್ತಪ್ಪ ಏನಪ್ಪ ನಿನ್ನ ಕಥೆ.? ಯಾರು ನಿನ್ನ ಹೆಂಡತಿ ಅಂತ ಕೇಳಿದ್ವಿ. ಆಗ ಅವನು ನಮಗೆ ಕೆಲವು ರೀಲ್ಸ್‌ಗಳನ್ನು ತೋರಿಸಿದ.

ಅಬ್ಬಾ... ಅದೆಷ್ಟು ಕ್ಯೂಟ್ ಕಪಲ್ಸ್ ಅಲ್ವಾ..? ಆ ವಿಡಿಯೋದಲ್ಲಿ ಹೇಗಿದ್ದಾನೆ ನೋಡಿ ಹೀರೋ ತರ. ಆದ್ರೆ ಈಗ ನೋಡಿ ಈ ರಮೇಶ ಹೇಗಾಗಿದ್ದಾನೆ ಅಂತ. ಆದ್ರೆ ಇವತ್ತಿನ ಈ ಪರಿಸ್ಥಿತಿಗೆ ಕಾರಣ ಲವ್. ತನ್ನ ಹೆಂಡತಿ. ಇನ್ನೂ ಆ ಹೆಂಡತಿ ಇವಳೇ ನೋಡಿ ಹೆಸರು ಯಶೋಧ. ಅಷ್ಟಕ್ಕೂ ಇವತ್ತು ಯಾಕೆ ನ್ಯಾಯ ಕೊಡಿಸಿ. ನನ್ನ ಹೆಂಡತಿಯನ್ನ ನನಗೆ ಕೊಡಿಸಿ ಅಂತ ಕೇಳ್ತಿದ್ದಾನೆ ಅಂತೆಲ್ಲಾ ಆಮೇಲೆ ಹೇಳ್ತೀನಿ. ಆದ್ರೆ ಅದಕ್ಕೂ ಮೊದಲು ಇವರಿಬ್ಬರ ಲವ್ ಸ್ಟೋರಿಯನ್ನ ಹೆಳಿಬಿಡ್ತೀವಿ.

ಇದನ್ನೂ ಓದಿ: ನಾರಾಯಣ ಮೂರ್ತಿಯ 17 ತಿಂಗಳ ಮೊಮ್ಮಗನ ಈ ವರ್ಷದ ಆದಾಯ 3.3 ಕೋಟಿ ರೂ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಇಚನಾಳ ಅನ್ನೋ ಗ್ರಾಮ. ಸರಿಯಾಗಿ 6 ವರ್ಷದ ಹಿಂದೆ, ಇದೇ ಗ್ರಾಮದ 16 ವರ್ಷದ ಒಬ್ಬ ಹುಡಗನಿಗೆ ಲವ್ ಆಗಿಬಿಟ್ಟಿತ್ತು. ವಯಸಲ್ಲದ ವಯಸಲ್ಲಿ ತನ್ನ ಮನಸನ್ನ ಮತ್ತೊಬ್ಬಳಿಗೆ ಕೊಟ್ಟುಬಿಟ್ಟಿದ್ದ. ಅವನೇ ಈ ರಮೇಶ. ಇನ್ನೂ ಈತ ಲವ್ ಮಾಡ್ತಿದ್ದ ಆ ಹುಡುಗಿಗೆ ಆಗ ಎಷ್ಟು ವಯಸ್ಸು ಗೊತ್ತಾ.? ಕೇವಲ 13 ವರ್ಷ. ಪ್ರೀತಿಗೆ ಕಣ್ಣಷ್ಟೇ ಅಲ್ಲ ವಯಸ್ಸೂ ಇಲ್ಲ. ಆದ್ರೆ 13 ವರ್ಷದ ಇದೇ ಯಶೋಧ ಮೇಲೆ ಈ ರಮೇಶನಿಗೆ ಲವ್ ಆಗಿಬಿಟ್ಟಿತ್ತು. ಯಶೋಧ ಕೂಡ ಇದೇ ಈಚನಾಳ ಗ್ರಾಮದವಳೇ. ಒಂದೇ ಗ್ರಾಮ, ಅವನ ಮನೆಗೂ ಈಕೆಯ ಮನೆಗೂ ಅಬ್ಬಬ್ಬಾ ಅಂದ್ರೆ 500 ಮೀಟರ್ ಅಂತರ. ಈ ಯಶೋಧ ಶಾಲೆಗೆ ಹೋಗಬೇಕೆಂದರೆ ಈ ರಮೇಶನ ಮನೆ ಮುಂದೇನೇ ಹೋಗಬೇಕಿತ್ತು. ಹೀಗೆ ಶಾಲೆಗೆ ಹೋಗುತ್ತಿದ್ದಿದ್ದನ್ನ ನೋಡುತ್ತಲೇ ಆಕೆಯ ಮೇಲೆ ಲವ್ ಬೆಳಸಿಕೊಂಡುಬಿಟ್ಟಿದ್ದ.

ಹೀಗೆ ಲವ್ ಮಅಡ್ತಿದ್ದ ರಮೇಶ ಒಂದು ದಿನ ಆಕೆಗೆ ಪ್ರಪೋಸ್ ಮಾಡಿಬಿಟ್ಟ. ಆಕೆ ಕೂಡ ಓಕೆ ಅಂದುಬಿಟ್ಟಳು. ಆಗಲೇ ನೋಡಿ ಇವರಿಬ್ಬರೂ ಪ್ರೇಮ ಲೋಕ ಸೃಷ್ಟಿ ಮಾಡಿಕೊಳ್ಳೋದು. ಈ ರೋಮಿಯೋ ಇದ್ದಾನಲ್ಲ ರಮೇಶ. ಈತ ಡ್ರೈವರ್. ಅವನ ಲವ್ವರ್ ಯಶೋಧ 8ನೇ ಕ್ಲಾಸ್. ಇನ್ನೂ ಈ ರಮೇಶ ಓದೇ ಇಲ್ಲ ಅಂತಿಲ್ಲ, ಈತ ಪಿಯು ಮುಗಿಸಿ ಡಿಗ್ರಿಗೆ ಫೀಸ್ ಕೂಡ ಕಟ್ಟಿದ್ದಾನೆ. ಆದರೆ, ಕಾಲೇಜಿಗೆ ಮಾತ್ರ ಹೋಗಿಲ್ಲ. ಕಾಲೇಜಿಗೆ ಹೋಗೋದು ಬಿಟ್ಟು ಈ ಯಶೋಧ ಜೊತೆ ಪ್ರೇಮ ಪಾಠ ಕಲಿಯುತ್ತಿದ್ದ.

ಈ ಯಶೋಧ ಇದ್ದಾಳಲ್ಲ, ಈಕೆ ಹೆತ್ತವರಿಗೆ ಒಬ್ಬಳೇ ಮಗಳು. ಓದೋದ್ರಲ್ಲಿ ಪರವಾಗಿಲ್ಲ. ಆದರೆ, ಓದೋ ವಯಸಲ್ಲೇ ಈ ರಮೇಶನ ಪ್ರೀತಿ ಬಲೆಗೆ ಬಿದ್ದು ಬಿಟ್ಟಿದ್ದಳು. ಇನ್ನೂ ಈ ರಮೇಶನ ಹೆತ್ತವರಿಗೆ ಮೂವರು ಗಂಡು ಮಕ್ಕಳು ಇವನೇ ಚಿಕ್ಕ ಮಗ. ಮನೆಯಲ್ಲಿ ಮುದ್ದು ಮಾಡಿಬಿಟ್ಟಿದ್ದರು. ದುಡಿಯಲಿಲ್ಲ ಅಂದ್ರೂ ಯಾರೂ ಕೇಳುತ್ತಿರಲಿಲ್ಲ. ಹೀಗಾಗಿ ಲವ್ ಅನ್ನೇ ಉದ್ಯೋಗ ಮಾಡಿಕೊಂಡು ಬಿಟ್ಟ. ಹೀಗೆ ಇಬ್ಬರೂ ಲವ್‌ನಲ್ಲಿ ಬೀಳೋ ಇವರಿಬ್ಬರೂ ಊರೂರು ಸುತ್ತಿದ್ದಾರೆ. ಹಲವು ರೀಲ್ಸ್‌ಗಳನ್ನು ಮಾಡಿಕೊಂಡು ನನಗೆ ನೀನು ನಿನಗೆ ನಾನು ಅಂತ ಸುತ್ತಾಡಿದ್ದಾರೆ.

ಆದರೆ ಇವರಿಬ್ಬರೂ ಮೊದಲೇ ಮೈನರ್ಸ್. ವಯಸಲ್ಲದ ವಯಸಲ್ಲಿ ಲವ್ ಮಾಡಿದ ಮೇಲೆ ಬೇರೆಯವರಿಗೆ ಗೊತ್ತಾಗದೇ ಇರುತ್ತಾ..? ಒಂದು ದಿನ ಈ ಚೆಲುವಿನ ಚಿತ್ತಾರದ ಪ್ರೀತಿ ಊರಿನವರಿಗೆಲ್ಲಾ ಗೊತ್ತಾಗಿಬಿಡುತ್ತದೆ. ಗ್ರಾಮದಲ್ಲಿ ಗುಸು ಗುಸು ಪಿಸು ಪಿಸು ಶುರುವಾಗುತ್ತದೆ. ಈ ವಿಷಯ ಹೆತ್ತವರಿಗೂ ಮುಟ್ಟುತ್ತೆ. ಆಗ ಯಶೋಧ ಮನೆಯವರು ರಮೇಶನ ಮನೆಗೆ ಬಂದು ವಾರ್ನ್ ಮಾಡ್ತಾರೆ. ನಮ್ಮ ಮನೆಯ ಹುಡುಗಿ ವಿಷಯಕ್ಕೆ ಬಂದ್ರೆ ನಿನ್ನ ಕಥೆ ಮುಗಿಸಿಬಿಡ್ತೀವಿ ಅಂತ ವಾನ್ ಮಾಡ್ತಾರೆ. ಯಾವಾಗ ಇಂಥಹದೊಂದು ವಾರ್ನಿಂಗ್ ಬಂತೋ ರಮೇಶನ ಮನೆಯವರು ಈತನನ್ನ ಬೆಂಗಳೂರಿಗೆ ಕಳಿಸಿಬಿಡ್ತಾರೆ. ಬೆಂಗಳೂರಿನಲ್ಲೇ ಟಾಟಾ ಏಸ್ ಗಾಡಿ ಓಡಿಸಿಕೊಂಡು ಜೀವನ ಮಾಡುತ್ತಿರುತ್ತಾನೆ. ಆದ್ರೂ ಪ್ರೀತಿಸೋದನ್ನ ಬಿಡೋದಿಲ್ಲ. ಯಶೋಧ ಮತ್ತು ರಮೇಶ ಫೋನಲ್ಲೇ ಕಾಲಿಂಗೂ ಚಾಟಿಂಗು ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ ನಾನು 21 ನೀನು 18 ಆಗೋವರೆಗೂ ಎಲ್ಲವನ್ನೂ ಎದುರಿಸೋಣ ನಂತರ ಮದುವೆ ಆಗಿಬಿಡೋಣ ಅಂತ ರಮೇಶ ತನ್ನ ಪ್ರೇಯಸಿಗೆ ಹೆಳುತ್ತಿರುತ್ತಾನೆ.

ಇದನ್ನೂ ಓದಿ: Chikkamagaluru: ಅಕ್ರಮ ಸಂಬಂಧಕ್ಕಾಗಿ ಲವರ್ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!

ಹೀಗೆ ವಿರಹದಲ್ಲೇ ಇವರ ಲವ್ ಸ್ಟೋರಿ 6 ವರ್ಷ ಕಳೆಯುತ್ತದೆ.. ರಮೇಶನಿಗೆ 21 ಆಕೆಗೆ 18 ವಯಸ್ಸು ಮುಗಿಯುತ್ತದೆ. ರಮೇಶ ಗ್ರಾಮಕ್ಕೆ ಹೋಗಿ ಬರೋದಕ್ಕೆ ಶುರು ಮಾಡುತ್ತಾನೆ. ಯಶೋಧ ಕುಟುಂಬ ಕೂಡ ತಮ್ಮ ಮಗಳು ಅವನನ್ನ ಮರೆತುಬಿಟ್ಟಿದ್ದಾಳೆ ಅಂತ ಅಂದುಕೊಳ್ಳುತ್ತಾರೆ. ಆದರೆ ಸೀನ್ ಬೇರೆಯದ್ದೇ ಆಗಿಬಿಟ್ಟಿರುತ್ತದೆ. ಕಳೆದ ತಿಂಗಳು ಅಂದ್ರೆ ಮಾರ್ಚ್ 3ನೇ ತಾರೀಖು ಗ್ರಾಮದಲ್ಲಿ ಜಾತ್ರೆ ಇರುತ್ತದೆ. ಆ ಜಾತ್ರೆಯಲ್ಲಿ ಇವರಿಬ್ಬರು ಖಾಸಗಿಯಾಗಿ ಭೇಟಿ ಮಾಡುತ್ತಾರೆ. ಆ ದೇವಿ ಎದುರೇ ಮದುವೆ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತಾರೆ.

ಇಬ್ಬರೂ ಮದುವೆಯಾಗಲು ನಿಶ್ಚಯಿಸುತ್ತಾರೆ. ಅದರಂತೆ ಮಾರ್ಚ್ 19ನೇ ತಾರೀಖು, ಸೀದಾ ಸಿಂಧನೂರಿನ ರಿಜಿಸ್ಟರ್ ಕಚೇರಿಗೆ ಹೋಗಿ ರಿಜಿಸ್ಟರ್ ಮದುವೆಯಾಗಿಬಿಡ್ತಾರೆ. ನಂತರ ಇಬ್ಬರೂ ತಮ್ಮ ತಮ್ಮ ಮನೆಗೆ ಹೋಗಿಬಿಡ್ತಾರೆ. ಯೋಶಧ ಮದವೆ ವಿಷಯವನ್ನ ಮನೆಯಲ್ಲಿ ಹೇಳೋದೇ ಇಲ್ಲ. ಹೆತ್ತವರಿಗೆ ಗೊತ್ತಾಗದ ಹಾಗೆ ಆಕೆ ಮೆಂಟೇನ್ ಮಾಡಿರುತ್ತಾಳೆ. ಇತ್ತ ರಮೇಶ ಕೂಡ ಯಶೋಧಾಳನ್ನ ತವರು ಮನೆಗೆ ಕಳಿಸಿ ಈತ ಸೀದಾ ಬೆಂಗಳೂರಿಗೆ ಬಂದು ಬಿಡ್ತಾನೆ. ಆದರೆ, ಬೆಂಗಳೂರಿಗೆ ಬಂದು ಸುಮ್ಮನೇ ಕೂರೋದಿಲ್ಲ. ರಿಜಿಸ್ಟರ್ ಕಚೇರಿಯಲ್ಲಿ ಆದ ಮದುವೆ ಅಧಿಕೃತ ಅನ್ನೋ ಸರ್ಟಿಫಿಕೇಟ್‌ಗಾಗಿ ಕಾಯುತ್ತಿರುತ್ತಾನೆ. ಏಕೆಂದರೆ ಸರ್ಟಿಫಿಕೇಟ್ ಸಿಕ್ಕಿದ ಮೇಲೆ ಏನ್ ಮಾಡಬೇಕು ಅನ್ನೋದನ್ನ ಆತ ಅದಾಗಲೇ ಪ್ಲಾನ್ ಮಾಡಿಕೊಂಡಿದ್ದ. ಮದುವೇ ಎಸ್ಕೇಪ್ ಪ್ಲಾನ್.

ಇಬ್ಬರೂ ವಯಸ್ಸಿಗೆ ಬಂದ ಮೇಲೆ ಯಾರಿಗೂ ಗೊತ್ತಾಗದ ಹಾಗೆ ರಿಜಿಸ್ಟರ್ ಮ್ಯಾರೇಜ್ ಆಗ್ತಾರೆ..ಮದುವೆಯಾದ ಮೇಲೆ ಯಶೋಧ ತಾಳಿ ಕಟ್ಟಿಕೊಂಡೇ ಮನೆಗೆ ಹೋಗ್ತಾಳೆ. ಆದ್ರೆ 15 ದಿನ ಯಾರಿಗೂ ಗೊತ್ತಾಗದ ಹಾಗೆ ಮ್ಯಾನೇಜ್ ಮಾಡ್ತಾಳೆ. ಮಾರ್ಚ್ 19.. ಯಶೋಧಾಗೆ ಮೊದಲ ಸೆಮಿಸ್ಟರ್ ಪರೀಕ್ಷೆ ಇರುತ್ತದೆ. ಇದೇ ಸರಿಯಾದ ಸಮಯ ಎಂದು ತಿಳಿದು ಅವತ್ತಿಗೆ ಮದುವೆ ಡೇಟ್ ಫಿಕ್ಸ್ ಮಾಡ್ತಾರೆ. ಆವತ್ತು ಯೋಶಧಾ ಮನೆಯಲ್ಲಿ ಪರೀಕ್ಷೆಗೆ ಹೋಗಿ ಬರ್ತೀನಿ ಅಂತ ಹೇಳಿ ಮನೆಯಿಂದ ಹೊರಡುತ್ತಾಳೆ. ಆದರೆ ಆಕೆ ಕಾಲೇಜಿಗೆ ಹೋಗೋದನ್ನ ಬಿಟ್ಟು ರಮೇಶ ಹೇಳಿದ ಜಾಗಕ್ಕೆ ಬರ್ತಾಳೆ. ನಂತರ ಇಬ್ಬರೂ ಸಿಂಧನೂರಿನ ರಿಜಿಸ್ಟರ್ ಕಛೇರಿಗೆ ಹೋಗಿ ಮದುವೆಯಾಗ್ತಾರೆ. ಆದರೆ, ರಿಜಿಸ್ಟರ್ ಮದುವೆಯಾದಮೇಲೆ ನಿಯಮದ ಪ್ರಕಾರ ನೋಟೀಸ್ ಬೋರ್ಡ್‌ನಲ್ಲಿ ಮದುವೆಯಾದ ಜೋಡಿಯ ಫೋಟೋಗಳನ್ನ ಹಾಕಿ ತಕರಾರಿದ್ದರೆ ಗಮನಕ್ಕೆ ತರಬಹುದು ಅಂತ ನೋಟೀಸ್ ಕೊಡ್ತಾರೆ. 15 ದಿನ ಯಾರು ಬರಲಿಲ್ಲ ಅಂದರೆ ಆ ಜೋಡಿ ಮದುವೆಯಾದಂತೆ.. ಆ ಮ್ಯಾರೇಜ್ ಸರ್ಟಿಫಿಕೇಟ್ ರಮೇಶ ಜೋಡಿಗೆ ಸಿಗೋದು ಏಪ್ರಿಲ್ 4ನೇ ತಾರಿಖು. ಇದೇ ದಿನಕ್ಕಾಗಿ ಇವರಿಬ್ಬರು ಕಾಯುತ್ತಾರೆ. 

ಈ ಟೈಂನಲ್ಲಿ ರಮೇಶ ಸುಮ್ಮನೆ ಕೂರೋದಿಲ್ಲ. ತಮಕೂರಿಗೆ ಹೋಗಿ ಒಂದು ಮನೆ ಮಾಡ್ತಾನೆ. ಬಾಡಿಗೆಗೆ ಪಡೆದು ಒಂದು ಸಂಸಾರ ನಡೆಸಲು ಏನೇನು ಬೇಕೋ ಎಲ್ಲಾ ಅರೆಂಜ್ ಮಾಡ್ತಾನೆ. ಬಳಿಕ ಏಪ್ರಿಲ್ 3ರಂದು ಲಗೇಜ್ ರೆಡಿ ಮಾಡಿಕೊ ಅಂತ ಯಶೋಧಾಗೆ ಕಾಲ್ ಮಾಡ್ತಾನೆ. ಆತನ ಮಾತಿನಂತೆ ಯಶೋಧ ಬಟ್ಟೆಯನ್ನೆಲ್ಲಾ ಪ್ಯಾಕ್ ಮಾಡಿಕೊಂಡಿರುತ್ತಾರೆ. ಆವತ್ತು ರಮೇಶ ತನ್ನೂರಿಗೆ ಹೋಗಿ ಅವಳನ್ನ ಕರೆದುಕೊಂಡು ತುಮಕೂರಿಗೆ ಬಂದುಬಿಡ್ತಾನೆ. ಇಬ್ಬರೂ ಸಂಸಾರ ಶುರು ಮಾಡ್ತಾರೆ. ಆದರೆ ಇತ್ತ ಮಗಳು ಕಾಣದ ಕುಟುಂಬ ಕಂಗಾಲಾಗುತ್ತದೆ. ಆದರೆ ಆಕೆ ರಮೇಶನ ಜೊತೆಯೇ ಹೋಗಿರೋದು ಅನ್ನೋದು ಕನ್ಫರ್ಮ್ ಆಗುತ್ತದೆ. ಸೋ ಸೀದಾ ಅವರು ರಮೇಶನಿಗೇ ಕಾಲ್ ಮಾಡ್ತಾರೆ. ಆಗ ರಮೇಶ ನಿಮ್ಮ ಮಗಳನ್ನ ನಾನು ಚನ್ನಾಗಿ ನೋಡಿಕೊಳ್ತೀನಿ ಅಂತ ಹೇಳ್ತಾನೆ. 

ಇದನ್ನೂ ಓದಿ: ವಿಕೃತಕಾಮಿ ಕಾರ್ತಿಕ, ಮಹಿಳೆಯರಿಗೆ ಖಾಸಗಿ ಅಂಗ ತೋರಿಸೋದೇ ಈತನ ಕಾಯಕ!

ಯಾವಾಗ ಮಗಳನ್ನ ಈತ ಕಳಿಸೋದಿಲ್ಲ ಅಂತ ಗೊತ್ತಾಯ್ತೋ ಸೀದಾ ಪೊಲೀಸ್ ಠಾಣೆಗೆ ಹೋಗಿ ಕಿಡ್ನಾಪ್ ಕೇಸ್ ದಾಖಲಿಸುತ್ತಾರೆ. ಪೊಲೀಸರು ಕೇಸ್ ದಾಖಲಿಸಿಕೊಂಡು ರಮೇಶನ ಲೊಕೇಷನ್ ಟ್ರೇಸ್ ಮಾಡಿ ಆತ ಇದ್ದ ಜಾಗಕ್ಕೇ ಹೋಗಿ ಇಬ್ಬರನ್ನೂ ಕರೆ ತರುತ್ತಾರೆ. ಆಗ ಠಾಣೆಯಲ್ಲಿ ಯಶೋಧ ತನ್ನ ಹೆತ್ತವರ ಜೊತೆಯೇ ಹೋಗೋದಾಗಿ ಹೇಳುತ್ತಾಳೆ. ಪೊಲೀಸರು ಆಕೆ ಹೇಳಿದಂತೆ ಹೆತ್ತವರ ಜೊತೆ ಕಳಿಸುತ್ತಾರೆ. ರಮೇಶನಿಗೂ ಆ ಯುವತಿ ತಂಟೆಗೆ ಹೋಗದಂತೆ ತಾಕೀತು ಮಾಡುತ್ತಾರೆ

ಆದರೆ, ಡ್ರೈವರ್ ರಮೇಶ ಹೇಳೋದೇ ಬೇರೆ. ಆಕೆಯ ಬಳಿ ಬಲವಂತವಾಗಿ ವಿಡಿಯೋವನ್ನ ಮಾಡಿಸಿಕೊಂಡಿದ್ದಾರಂತೆ. ಆ ವಿಡಿಯೋವನ್ನ ಆತನಿಗೆ ತೋರಿಸಿದಾಗ ಆತ ತನ್ನ ಎದುರಿಗೇ ಬಂದು ಹೇಳಲು ಕೇಳಿದ್ದನಂತೆ. ಆಗ ಆಕೆ ಎದುರಿಗೆ ಬಂದಾಗ ಆಕೆ ರಮೇಶನ ಜೊತೆ ಹೋಗೋದಾಗಿ ಹೇಳಿದ್ದಳಂತೆ. ಆದರೆ, ಪೊಲೀಸರು ಆ ಹೇಳಿಕೆಯನ್ನ ದಾಖಲಿಸಿಕೊಂಡಿದ್ದರೂ ನಂತರ ಅದನ್ನ ಡಿಲೀಟ್ ಮಾಡಿದ್ದಾರೆ ಎಂದು ಆತ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಯಶೋಧ ಕುಟುಂಬದವರು ಪ್ರಭಾವಿಗಳು. ಹೀಗಾಗಿ ಪೊಲೀಸರ ಮೇಲೆ ಒತ್ತಡ ಹಾಕಿ ನನಗೆ ಅನ್ಯಾಯ ಮಾಡಿದ್ದಾರೆ ಅಂತ ಹೇಳುತ್ತಿದ್ದಾನೆ. ಪೊಲೀಸರು ನೋಡಿದರೆ ಹಾಗೆ ಹೇಳ್ತಿದ್ದಾರೆ, ಈತನ ಹೇಳಿಕೆ ಬೇರೆನೇ ಇದೆ. ಆದ್ರೆ ಇಬ್ಬರಲ್ಲಿ ಯಾರು ಸತ್ಯ ಅನ್ನೋದು ದೇವರಿಗೇ ಗೊತ್ತು. ಆದರೆ ಇಬ್ಬರು ಪ್ರೇಮಿಗಳು ಇವತ್ತು ಒಂದಾಗೋಕೆ ಹಾತೊರೆಯುತ್ತಿದ್ದಾರೆ. ಕಾನೂನಿನ ಪ್ರಕಾರ ಆ ಯುವತಿಗೆ ರಮೇಶನ ಜೊತೆಯೇ ಬಾಳುವ ಆಸೆ ವ್ಯಕ್ತಪಡಿಸಿದರೆ ಅವರಿಬ್ಬರನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ರಮೇಶ ಸುಳ್ಳು ಹೇಳುತ್ತಿದ್ದರೆ ಪೊಲೀಸರು ವಿಚಾರಣೆ ಮಾಡಿ ಅವನಿಗೆ ಬುದ್ಧಿ ಕಲಿಸಬೇಕಿದೆ. ಇಲ್ಲವಾದರೆ ಅವರಿಬ್ಬರನ್ನ ಅವರ ಪಾಡಿಗೆ ಬದುಕೋಕೆ ಬಿಡಬೇಕು.

Must See