
ಸೀನಿಯರ್ ಲಾಯರ್ ಮದುವೆಯಾಗಲು ಹೆಂಡತಿಯನ್ನೇ ಮುಗಿಸಿದ ಗಂಡ; 2 ಬಾರಿ ಜಸ್ಟ್ ಮಿಸ್, 3ನೇ ಸಲ ಮಟಾಶ್!
ಪ್ರೀತಿಸಿ ಮದುವೆಯಾದ ಗಂಡನೇ ಗರ್ಭಿಣಿ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಸುಪಾರಿ ಕೊಲೆಗಾರರ ಮೂಲಕ ಈ ಕೃತ್ಯ ಎಸಗಿದ ಆತನ ದುಷ್ಕೃತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ. ನ್ಯಾಯವಾದಿಯಾಗಿದ್ದ ಆತ ಈ ಕೃತ್ಯ ಎಸಗಿದ್ದು ಏಕೆ ಎಂಬುದು ತಿಳಿದುಕೊಳ್ಳಲು ಓದಿ.
ಅವರಿಬ್ಬರೂ ಒಂದೇ ಊರಿನವರು. ವರ್ಷಗಳ ಕಾಲ ಪ್ರೀತಿಸಿ ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರು. ಈಗ ಹೆಂಡತಿ 6 ತಿಂಗಳ ಗರ್ಭಿಣಿ. ಆವತ್ತೊಂದು ದಿನ ಗಂಡ ಸುತ್ತಾಡಿಕೊಂಡು ಬರೋಣ ಬಾ ಅಂತ ಹೆಂಡತಿಯನ್ನ ಕರೆದುಕೊಂಡು ಹೊರಗೆ ಹೋಗಿದ್ದನು. ಆದ್ರೆ ಮಾರ್ಗ ಮಧ್ಯೆ ಆ್ಯಕ್ಸಿಡೆಂಟ್ ಆಗಿಬಿಡ್ತು. ಹೆಂಡತಿ ಅಲ್ಲೇ ಪ್ರಾಣಬಿಟ್ಟಳು. ಗಂಡನೇ ಪೊಲೀಸರ ಬಳಿ ಹೋಗಿ ವಿಷಯ ಹೇಳಿ ಕೇಸ್ ದಾಖಲಿಸಿದ. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್ ಅಲ್ಲ ಬದಲಿಗೆ ಮರ್ಡರ್ ಅನ್ನೋ ಸಂಶಯ ಬಂದಿತ್ತು. ಕಂಪ್ಲೆಂಟ್ ಕೊಡಲು ಬಂದಿದ್ದ ಗಂಡನನ್ನೇ ವಿಚಾರಣೆ ಮಾಡಿದ್ದರು. ಆಗಲೇ ನೋಡಿ ಗರ್ಭೀಣಿಯನ್ನ ಗಂಡನೇ ಕೊಲೆ ಮಾಡಿದ್ದ ಅನ್ನೋ ಸತ್ಯ ಗೊತ್ತಾಗಿದ್ದು. ಅಷ್ಟಕ್ಕೂ ಗಂಡನೇ ಹೆಂಡತಿಯನ್ನ ಕೊಂದಿದ್ದೇಕೆ..? ಒಂದು ಡೆಡ್ಲಿ ಮರ್ಡರ್ ಹಿಂದಿನ ರೋಚಕ ಇನ್ಬೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್.
ಪ್ರದೀಪ ತನ್ನ ಸೀನಿಯರ್ಳನ್ನ ಮದುವೆಯಾಗಲು ಗರ್ಭಿಣಿ ಹೆಂಡತಿಯನ್ನೇ ಮುಗಿಸೋ ನಿರ್ಧಾರ ಮಾಡಿದ್ದನು. ಅದಕ್ಕಾಗಿ ಸ್ನೇಹಿತನಿಗೆ ರೂ. 15 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಇದರಲ್ಲಿ ₹90 ಸಾವಿರ ಅಡ್ವಾನ್ಸ್ ಪಡೆದ ಪ್ರದೀಪನ ಗೆಳೆಯ ರಾಜೇಂದ್ರ ಒಂದು ಒಳ್ಳೆ ಸ್ಕೆಚ್ ಅನ್ನೇ ಹಾಕಿದ್ದ. ನಂತರ ಏನಾಯ್ತು..? ಆವತ್ತು ಚೈತ್ರಾಣಿ ಸಾಯೋ ದಿನ ಏನೇನಾಯ್ತು..? ಈ ಕಿರಾತಕರು ಅವಳನ್ನ ಮುಗಿಸಿದ್ದೇಗೆ..? ಎನ್ನುವುದು ಅತ್ಯಂತ ರೋಚಕವಾಗಿದೆ.
ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆ ಜಗಳ; ನೇಣಿಗೆ ಶರಣಾದ ಹೋಟೆಲ್ ಉದ್ಯಮಿ
ಅಡ್ವಾನ್ಸ್ ಹಣವನ್ನ ಪಡೆದು ರಾಜೆಂದ್ರ 2 ಬಾರಿ ಸ್ಕೆಚ್ ಹಾಕಿ ಚೈತ್ರಾಣಿಯನ್ನ ಮುಗಿಸೋದಕ್ಕೆ ನೋಡಿದ್ದನು. ಆದರೆ, ಚೈತ್ರಾಣಿ ಆ ಎರಡೂ ಅಟೆಂಪ್ಟ್ಮನಲ್ಲಿ ಜಸ್ಟ್ ಮಿಸ್ ಆಗಿದ್ದಳು. ಆಗ ಗಂಡ ಪ್ರದೀಪನೇ ಫೀಲ್ಡ್ಗೆ ಇಳಿದುಬಿಟ್ಟ. ನಾನೇ ಹೆಂಡತಿಯನ್ನ ಕರೆದುಕೊಂಡು ಬರ್ತೀನಿ ಎಲ್ಲಾ ಸೇರಿ ಅವಳನ್ನ ಮುಗಿಸೋಣ ಅಂತ ಡಿಸೈಡ್ ಮಾಡಿ ಆವತ್ತೊಂದು ದಿನ ಹೆಂಡತಿಗೆ ಹಾಗೇ ಸುತ್ತಾಕೊಂಡು ಬರೋಣ ಬಾ ಅಂತ ಕರೆದುಕೊಂಡು ಹೋಗ್ತಾನೆ. ಆಕೆ ಕೂಡ ಖುಷಿ ಖುಷಿಯಿಂದ ಕಾರು ಹತ್ತಿದ್ದಾಳೆ. ಅಷ್ಟೇ ಮಾರ್ಗ ಮಧ್ಯೆ ಕಾರಿನೊಳಗೆ ಬಂದ ಸುಪಾರಿ ಕಿಲ್ಲರ್ಸ್ ಅವಳ ತಲೆಗೆ ಹೊಡೆದು ಕೊಂದು ಬಿಡ್ತಾರೆ. ನಂತರ ಗಂಡ ಆ್ಯಕ್ಸಿಡೆಂಟ್ ಆಗಿದೆ ಅಂತ ಅಳುತ್ತಾ ಪೊಲೀಸ್ ಠಾಣೆಗೆ ಹೋಗ್ತಾನೆ. ಆದ್ರೆ ಮಾಡಿದ ಪಾಪ ಅವನನ್ನೇ ಅಲ್ಲೇ ಲಾಕ್ ಆಗುವಂತೆ ಮಾಡುತ್ತದೆ.
ನ್ಯಾಯವಾದಿ ಆಗಿದ್ದುಕೊಂಡು ಸಮಾಜಕ್ಕೆ ಮಾದರಿ ಆಗಬೇಕಿದ್ದ ಪ್ರದೀಪ ಹೆಂಡತಿ ಗರ್ಭಿಣಿ ಅಂತ ಗೊತ್ತಿದ್ರೂ ಅವಳನ್ನ ಕೊಂದು ಮುಗಿಸಿದ್ದಾನೆ.. ಮಾಡಬಾರದ ಕೆಲಸ ಮಾಡಿ ಜೈಲು ಪಾಲಾಗಿದ್ದಾನೆ.. ಈತನಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೇನೇ ಅಂತ ಹೇಳ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇವೆ.