
ಕರುನಾಡಲ್ಲಿ ಬಿಜೆಪಿ ದಿಗ್ಗಜರ ರೌಂಡ್ಸ್: ಅಭ್ಯರ್ಥಿಗಳ ಪರ 'ಯೋಗಿ' ಅಬ್ಬರ
ಆಂಜನೇಯನ ನಾಡಿಗೆ ಯೋಗಿ ಆದಿತ್ಯನಾಥ್ ಎಂಟ್ರಿ
ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ
ಮಂಗಳೂರಿನಲ್ಲಿ ಜೆ.ಪಿ. ನಡ್ಡಾ ಮತಬೇಟೆ
ರಾಜ್ಯಕ್ಕೆ ಇಂದು ಸಹ ಬಿಜೆಪಿಯ ದಿಗ್ಗಜ ನಾಯಕರು ಭೇಟಿ ನೀಡುತ್ತಿದ್ದು, ಪಕ್ಷ ವೀಕ್ ಇರುವ ಕಡೆ ಪ್ರಚಾರ ನಡೆಸಲಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್, ಜೆ.ಪಿ. ನಡ್ಡಾ ರಾಜ್ಯದಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ಕೊಪ್ಪಳ, ರಾಯಚೂರು, ಬೀದರ್ನಲ್ಲಿ ಯೋಗಿ ಆದಿತ್ಯನಾತ್ ಮತಬೇಟೆ ನಡೆಸಲಿದ್ದಾರೆ. ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಪರ ಪ್ರಚಾರ ಮಾಡಲಿದ್ದಾರೆ. ಮಂಗಳೂರು, ದಾವಣಗೆರೆಯಲ್ಲಿ ಜೆ.ಪಿ. ನಡ್ಡಾ ಸಂಚಾರ ನಡೆಸಲಿದ್ದಾರೆ. ಅಲ್ಲದೇ ಸುಳ್ಯದ ಪ್ರವೀಣ್ ನೆಟ್ಟಾರು ಮನೆಗು ನಡ್ಡಾ ಭೇಟಿ ನೀಡಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯಲ್ಲಿ ನಡ್ಡಾ ಭಾಗಿಯಾಗಿ, ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಕರ್ನಾಟಕ ಕುರುಕ್ಷೇತ್ರ ಅಖಾಡಕ್ಕೆ 'ನಮೋ' ಎಂಟ್ರಿ: ಇಂದು ಮೈಸೂರು ಭಾಗದಲ್ಲಿ ಮತಬೇಟೆ