ಪುಲಿಕೇಶಿ ನಗರದಿಂದ ‘ಕೈ’ ಪರ ಅಖಾಡಕ್ಕಿಳಿಯುವವರು ಯಾರು ..ಪುಲಿಕೇಶಿ ನಗರ ಕ್ಷೇತ್ರದ ಮತದಾರರ ಬೆಂಬಲ ಯಾರಿಗೆ..?

ಕಾಂಗ್ರೆಸ್ ಎರಡನೇ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಕುತೂಹಲ ಹುಟ್ಟಿಸಿದ್ದು , ಬೆಂಗಳೂರಿನ ಪುಲಿಕೇಶಿ ನಗರದಿಂದ  ಯಾರಿಗೆ  ಟಿಕೆಟ್ ಸಿಗುತ್ತೆ ಎಂದು ನೋಡಬೇಕಿದೆ. ಮನೆಗೆ ಬೆಂಕಿ ಹಚ್ಚಿದವರಿಗಾ..? ಮನೆ ಕಳಕ್ಕೊಂಡವರಿಗೆ ಸಿಗುತ್ತಾ ಟಿಕೆಟ್?  ಈ ವಿಡಿಯೋ ನೋಡಿ 
 

Share this Video
  • FB
  • Linkdin
  • Whatsapp

ರಾಜ್ಯ ಕಾಂಗ್ರೆಸ್ ವಿಧಾನಸಭಾ ಎಲೆಕ್ಷನ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದೆ. ಇದರಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಫೈನಲಾಗಿದೆ. ಎಡರನೇ ಪಟ್ಟಿಯಲ್ಲಿ ಉಳಿದ ಅಭ್ಯರ್ಥಿಗಳ ಫೈನಲ್ ಆಗಲಿದೆ. ಇನ್ನು ಫೈನಲ್ ಆಗಬೇಕಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ, ಕೆಲ ಕ್ಷೇತ್ರಗಳು ಹೆಚ್ಚು ಕುತೂಹಲ ಹುಟ್ಟಿಸಿವೆ. ಅದರಲ್ಲಿ ಬೆಂಗಳೂರಿನ ಪುಲಿಕೇಶಿ ನಗರ ಅಭ್ಯರ್ಥಿ ಯಾರು ಎನ್ನುವುದಾಗಿದೆ. ಹಾಗಿದ್ರೆ ಪುಲಿಕೇಶಿ ನಗರ ಟಿಕೆಟ್ ಯಾರಿಗೆ? ಇದರಲ್ಲಿ ಗೆಲ್ಲೋರು ಯಾರು? ಡಿಕೆಶಿ ನಾ ಅಥವಾ ಸಿದ್ದರಮಯ್ಯನವರಾ? ಪುಲಿಕೇಶಿ ನಗರ ಕ್ಷೇತ್ರಕ್ಕೆದಿಂದ ಕಾಂಗ್ರೆಸ್ ಪಕ್ಷ ಸಂಪತ್ ರಾಜ್ ಅಥವಾ ಅಖಂಡ ಶ್ರೀನಿವಾಸ ಮೂರ್ತಿ ಇಬ್ಬರಲ್ಲಿ ಆಯ್ದುಕೊಳ್ಳಬೇಕು. ಯಾಕೆ ಎಂದರೆ ಇಬ್ಬರನ್ನು ಬಿಟ್ಟು ಮೂರನೇ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮತ್ತೊಬ್ಬ ಹೇಳಿಕೊಳ್ಳುವ ನಾಯಕ ಇಲ್ಲ ಎನ್ನಬಹುದು.

Related Video