
ವರುಣ ಮೇಲೆ ಬಿಜೆಪಿ ಕಣ್ಣು: ಸಿದ್ದು ಮಣಿಸಲು ಕೇಸರಿ ರಣತಂತ್ರ
ವರುಣದಲ್ಲಿ ಬಿ.ವೈ. ವಿಜಯೇಂದ್ರ ಪ್ರಚಾರ
ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರ
ಸಿದ್ದು ಲೆಕ್ಕಚಾರ ಬುಡಮೇಲು ಮಾಡಿದ ಬಿಜೆಪಿ
ಮೈಸೂರು: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ವರುಣದಲ್ಲಿ ರಂಗೇರಿದ್ದು, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂಟ್ರಿಯಿಂದ ಸಿದ್ದರಾಮಯ್ಯ ಅವರಿಗೆ ಆತಂಕ ಎದುರಾದಂತೆ ಕಾಣುತ್ತಿದೆ. ವರುಣ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ವಿಜಯೇಂದ್ರ ವಿ. ಸೋಮಣ್ಣ ಪರ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ನಾನು ವರುಣದಲ್ಲಿ ಪ್ರಚಾರ ಮಾಡಲ್ಲ, ಅಲ್ಲಿ ಯತೀಂದ್ರ ನೋಡಿಕೊಳ್ಳುತ್ತಾರೆ ಎಂದಿದ್ದರು. ಆದ್ರೆ ಈಗ ಬಿಜೆಪಿಯ ಪ್ರಬಲ ನಾಯಕರು ವರುಣಕ್ಕೆ ಬಂದಿರುವ ಕಾರಣ, ಸಿದ್ದು ತಮ್ಮ ತಂತ್ರವನ್ನು ಬದಲಾಯಿಸಿ ಪ್ರಚಾರಕ್ಕೆ ಮುಂದಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: News Hour: ಕರ್ನಾಟಕ ಕದನ ಕಣಕ್ಕೆ ಕೇಸರಿ ಕಲಿಗಳ ಎಂಟ್ರಿ!