Asianet Suvarna News Asianet Suvarna News

ವರುಣ ಮೇಲೆ ಬಿಜೆಪಿ ಕಣ್ಣು: ಸಿದ್ದು ಮಣಿಸಲು ಕೇಸರಿ ರಣತಂತ್ರ

ವರುಣದಲ್ಲಿ ಬಿ.ವೈ. ವಿಜಯೇಂದ್ರ ಪ್ರಚಾರ
ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರ
ಸಿದ್ದು ಲೆಕ್ಕಚಾರ ಬುಡಮೇಲು ಮಾಡಿದ ಬಿಜೆಪಿ

First Published Apr 22, 2023, 10:31 AM IST | Last Updated Apr 22, 2023, 10:31 AM IST

ಮೈಸೂರು: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ವರುಣದಲ್ಲಿ ರಂಗೇರಿದ್ದು, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಂಟ್ರಿಯಿಂದ ಸಿದ್ದರಾಮಯ್ಯ ಅವರಿಗೆ ಆತಂಕ ಎದುರಾದಂತೆ ಕಾಣುತ್ತಿದೆ. ವರುಣ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ವಿಜಯೇಂದ್ರ ವಿ. ಸೋಮಣ್ಣ ಪರ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ನಾನು ವರುಣದಲ್ಲಿ ಪ್ರಚಾರ ಮಾಡಲ್ಲ, ಅಲ್ಲಿ ಯತೀಂದ್ರ ನೋಡಿಕೊಳ್ಳುತ್ತಾರೆ ಎಂದಿದ್ದರು. ಆದ್ರೆ ಈಗ ಬಿಜೆಪಿಯ ಪ್ರಬಲ ನಾಯಕರು ವರುಣಕ್ಕೆ ಬಂದಿರುವ ಕಾರಣ, ಸಿದ್ದು ತಮ್ಮ ತಂತ್ರವನ್ನು ಬದಲಾಯಿಸಿ ಪ್ರಚಾರಕ್ಕೆ ಮುಂದಾಗಿದ್ದಾರೆ. 

ಇದನ್ನೂ ವೀಕ್ಷಿಸಿ: News Hour: ಕರ್ನಾಟಕ ಕದನ ಕಣಕ್ಕೆ ಕೇಸರಿ ಕಲಿಗಳ ಎಂಟ್ರಿ!