Asianet Suvarna News Asianet Suvarna News

ಮತ್ತೆ ಡೆಲ್ಲಿಗೆ ಸಿಎಂ ದೌಡು? ಕತ್ತಿಗೆ ಪಟ್ಟ ಗ್ಯಾರಂಟಿ!

ಬಿಜೆಪಿ ಪಾಳಯದಲ್ಲಿ ಸಂಪುಟ ಸಂಭ್ರಮ| ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹೊಸ ಶಾಸಕರು| ಮೂಲ ಬಿಜೆಪಿಗರಲ್ಲಿ ಭರವಸೆಯ ಬೆಳಕು

ಬೆಂಗಳೂರು[ಫೆ.06]: ರಾಜ್ಯ ಬಿಜೆಪಿಯಲ್ಲಿ ಸಂಪುಟ ಸಂಭ್ರಮ. ಹೀಗಿರುವಾಗ ಮಾತನಾಡಿರುವ ಸಿಎಂ ಯಡಿಯೂರಪ್ಪ 10 ಮಂದಿಗೆ ವಾರದೊಳಗೆ ಖಾತೆ ಹಂಚಿಕೆ ಮಾಡುತ್ತೇವೆ. ಸಾಧ್ಯವಾದರೆ ಮತ್ತೊಮ್ಮೆ ದೆಹಲಿಗೆ ಹೋಗಿ ಬರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಮಂತ್ರಿಗಿರಿ ಸಿಗುತ್ತದೆ ಎಂದೇ ಆಸೆ ಹೊತ್ತುಕೊಂಡಿದ್ದ ಲಿಂಬಾವಳಿ, ಕತ್ತಿ ಹಾಗೂ ಯೋಗೇಶ್ವರ್‌ಗೆ ಕೊನೆ ಕ್ಷಣದಲ್ಲಿ ನಡೆದ ಬೆಳವಣಿಗೆಗಳಿಂದ ತೀವ್ರ ನಿರಾಸೆಯಾಗಿದೆ.

ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ನೂತನ ಸಚಿವರಿಗೆ CM ಕ್ಲಾಸ್

ಆದರೀಗ ಸಿಎಂ ಆಡಿಡುವ ಮಾತುಗಳಿಂದ ಈ ಮೂವರು ಮೂಲ ಬಿಜೆಪಿಗರಲ್ಲಿ ಮತ್ತೆ ಮಿನಿಸ್ಟರ್ ಆಗುವ ಕನಸು ಚಿಗುರೊಡೆದಿದೆ.

Video Top Stories