Asianet Suvarna News Asianet Suvarna News

ರಾಜ್ಯದಲ್ಲಿ ನಾಯಕತ್ವ ಬದಾಲಾವಣೆ ಮಾಡ್ತೀರೋ?, ಇಲ್ಲೋ? ಎಂದ ಕತ್ತಿ

* ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್‌ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ಹೇಳಬೇಕು
* ಸಿಎಂ ಪರ, ವಿರೋಧಿ ಹೇಳಿಕೆಗಳಿಂದ ಪಕ್ಷದ ಇಮೇಜ್‌ಗೆ ಡ್ಯಾಮೇಜ್‌ 
* ಪರಿಸ್ಥಿತಿ ಹೀಗೆ ಮುಂದುವರೆದರೆ ಆಡಳಿತ ನಡೆಸುವುದಾರೂ ಹೇಗೆ?

ಬೆಂಗಳೂರು(ಜೂ.18):  ರಾಜ್ಯದಲ್ಲಿ ನಾಯಕತ್ವ ಬದಾಲಾವಣೆ ಮಾಡ್ತೀರೋ?, ಇಲ್ಲೋ? ಈ ಬಗ್ಗೆ ಹೈಕಮಾಂಡ್‌ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನ ಹೇಳಬೇಕು ಅಂತ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರ ಭೇಟಿ ವೇಳೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ. ಸಿಎಂ ಪರ, ವಿರೋಧಿ ಹೇಳಿಕೆಗಳಿಂದ ಪಕ್ಷದ ಇಮೇಜ್‌ಗೆ ಡ್ಯಾಮೇಜ್‌ ಆಗುತ್ತಿದೆ. ನಮ್ಮ ವೀಕ್‌ನೆಸ್‌ಗಳನ್ನ ಮುಂದಿಟ್ಟುಕೊಂಡು ವಿಪಕ್ಷಗಳು ಮತ್ತಷ್ಟು ಬಲವಾಗುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಆಡಳಿತ ನಡೆಸುವುದಾರೂ ಹೇಗೆ? ಅಂತ ಉಮೇಶ್‌ ಕತ್ತಿ ಪ್ರಶ್ನಿಸಿದ್ದಾರೆ. 

ನಾಯಕತ್ವ ಬದಲಾವಣೆಯ ಕೂಗು: ಇಂದು ಕೆಲ ಶಾಸಕರ ಜೊತೆ ಅರುಣ್‌ ಸಿಂಗ್‌ ಸಭೆ?

Video Top Stories