'ನಾನಾ-ನೀನಾ' ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ?: ಬಂಡೆ ವಿರುದ್ಧ 'ಕಮಿಷನ್ ಬಾಂಬ್' ಸಿಡಿಸಿದ ದಳಪತಿ

ಕುಮಾರಣ್ಣನೇ  “ನನ್ನ ಅಣ್ಣ”  ಅಂದ್ರು ಡಿಕೆಶಿ..! “ಅಂಥಾ ತಮ್ಮ”. ನಂಗೆ ಬೇಡ್ವೇ ಬೇಡ ಅಂದ್ರು ಎಚ್’ಡಿಕೆ..! ದುಷ್ಮನಿ.. ದೋಸ್ತಿ.. ಕುಸ್ತಿ.. ಜೋಡೆತ್ತು.. ಈಗ ಅಣ್ತಮ್ಮ..! “ನಾನಾ-ನೀನಾ” ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ತಮ್ಮಾ ಬಾಂಡ್ ಅಣ್ಣಾ ರಾಂಗ್..! 

Share this Video
  • FB
  • Linkdin
  • Whatsapp

ಕುಮಾರಣ್ಣನೇ “ನನ್ನ ಅಣ್ಣ” ಅಂದ್ರು ಡಿಕೆಶಿ..! “ಅಂಥಾ ತಮ್ಮ”. ನಂಗೆ ಬೇಡ್ವೇ ಬೇಡ ಅಂದ್ರು ಎಚ್’ಡಿಕೆ..! ದುಷ್ಮನಿ.. ದೋಸ್ತಿ.. ಕುಸ್ತಿ.. ಜೋಡೆತ್ತು.. ಈಗ ಅಣ್ತಮ್ಮ..! “ನಾನಾ-ನೀನಾ” ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ತಮ್ಮಾ ಬಾಂಡ್ ಅಣ್ಣಾ ರಾಂಗ್..! ಅವರಿಬ್ಬರದ್ದು ಇಡೀ ಕರ್ನಾಟಕವೇ ಬೆಕ್ಕಸ ಬೆರಗಾಗಿ ನೋಡಿದ್ದ ದುಷ್ಮನಿ.. ರಾಜಕೀಯ ದ್ವೇಷಕ್ಕೆ ಮತ್ತೊಂದು ಹೆಸರೇ ಆ ರಣರೋಚಕ ದುಷ್ಮನಿ. ಸೀನ್ ಕಟ್ ಮಾಡಿದ್ರೆ, ದುಷ್ಮನಿಯ ಜಾಗದಲ್ಲಿ ವಿಜೃಂಭಿಸಿತ್ತು ಜೋಡೆತ್ತು ದೋಸ್ತಿ. 

Add Asianetnews Kannada as a Preferred SourcegooglePreferred

ಮೊದಲು ರಣದ್ವೇಷ, ನಂತ್ರ ದೋಸ್ತಿ, ಜಂಗೀಕುಸ್ತಿ.. ಈಗ ಅಣ್ತಮ್ಮ ರಹಸ್ಯ. ಇಲ್ಲಿ ಅಣ್ಣಾಬಾಂಡ್ ರಾಂಗ್ ಆಗಿದ್ದಾರೆ, ತಮ್ಮರಾಯ ರೊಚ್ಚಿಗೆದ್ದಿದ್ದಾರೆ. ಪರಿಣಾಮ ಹೊತ್ತಿಕೊಂಡಿದೆ ಹಳೇದ್ವೇಷದ ಹೊಸ ಕಿಡಿ. ಯಾರೆಷ್ಟೇ ಅಬ್ಬರಿಸಿದ್ರೂ, ಯಾರೆಷ್ಟೇ ಕೌಂಟರ್ ಅಟ್ಯಾಕ್ ಮಾಡಿದ್ರೂ ಕುಮಾರಣ್ಣ ಮಾತ್ರ ಜಗ್ಗುತ್ತಿಲ್ಲ, ಬಗ್ಗುತ್ತಿಲ್ಲ. ಅಣ್ಣಾಬಾಂಬ್-ತಮ್ಮರಾಯನ ನಡುವಿನ ಜಟಾಪಟಿ. ದುಷ್ಮನ್'ಗಳಾಗಿದ್ದವರು, ದೋಸ್ತಿಗಳಾದ್ರು. ದೋಸ್ತಿಗಳಾಗಿದ್ದವರು ಜೋಡೆತ್ತುಗಳಾದ್ರು. ಮತ್ತೆ ದುಷ್ಮನಿ ಶುರುವಾಯ್ತು ಅನ್ನುವಷ್ಟರಲ್ಲಿ ಅಣ್ತಮ್ಮ ರಗಳೆ. 

ಒಂದು ಕಡೆ ಅಣ್ಣಾಬಾಂಡ್, ಇನ್ನೊಂದ್ಕಡೆ ತಮ್ಮರಾಯ. ಇದು ಹಳೇದ್ವೇಷದಲ್ಲಿ ಭುಗಿಲೆದ್ದ ಹೊಸ ಕಾಳಗ ರಹಸ್ಯ. ದಳಪತಿ ಜೊತೆಗಿನ ಯುದ್ಧಕ್ಕೆ ಡಿಸಿಎಂ ಡಿಕೆಶಿ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಹಾಗಾದ್ರೆ ತಮ್ಮರಾಯನ ಕೌಂಟರ್ ಹೇಗಿರಲಿದೆ..? ಆ ಕೌಂಟರ್'ಗೆ ಪ್ರತಿಯಾಗಿ ಅಣ್ಣಾಬಾಂಡ್ ಮತ್ತೊಂದು ಬಾಂಬ್ ಹಾಕ್ತಾರಾ..? ದಳಪತಿ ಕುಮಾರಸ್ವಾಮಿ ಟಾರ್ಗೆಟ್ ಇಡೀ ಕಾಂಗ್ರೆಸ್ ಸರ್ಕಾರವೇ ಆದ್ರೂ, ಮೇನ್ ಟಾರ್ಗೆಟ್ ಡಿಸಿಎಂ ಡಿಕೆ ಶಿವಕುಮಾರ್. ಅಷ್ಟಕ್ಕೂ ತಮ್ಮನ್ನು ಅಣ್ಣಾ ಅಂದಿರೋ ಡಿಕೆಶಿ ವಿರುದ್ಧ ಎಚ್ಡಿಕೆ ಈ ಪರಿ ಮುಗಿ ಬಿದ್ದಿರೋದ್ಯಾಕೆ..? ಇದ್ರ ಹಿಂದಿನ ರಹಸ್ಯವನ್ನು ತೋರಿಸ್ತೀವಿ ನೋಡಿ.

Related Video