Asianet Suvarna News Asianet Suvarna News

‘ದೋಸ್ತಿ’ಗಳಿಗೆ ಖಡಕ್ ಸಂದೇಶ ಕೊಟ್ರಾ ರೆಬೆಲ್ ಲೇಡಿ ?: ‘ಮಂಡ್ಯನ ಎಂದೆಂದಿಗೂ ಬಿಡಲ್ಲ’ ಎಂದು ಸುಮಲತಾ ಶಪಥ !

ಮಂಡ್ಯ ಬಿಜೆಪಿ ಟಿಕೆಟ್‌ಗೆ ಸಂಸದೆ ಸುಮಲತಾ ಪಟ್ಟು..!
‘ದೋಸ್ತಿ’ಗಳಿಗೆ ಖಡಕ್ ಸಂದೇಶ ಕೊಟ್ಟ ರೆಬೆಲ್ ಲೇಡಿ
ಮತ್ತೆ ಇಂಡಿಯಾದಲ್ಲಿ ಸದ್ದು ಮಾಡಲಿದೆ ಮಂಡ್ಯ ಜಿಲ್ಲೆ..! 

First Published Feb 19, 2024, 11:38 AM IST | Last Updated Feb 19, 2024, 11:39 AM IST

ಅಂಬರೀಶ್ ಅವರ ಹಣೆಗೆ ಮಂಡ್ಯ ಮಣ್ಣಿನ ತಿಲಕ ಇಟ್ಟು ಕಳುಹಿಸಿದ್ದೇವೆ. ಮಂಡ್ಯದ(Mandya) ಮಣ್ಣಿನ ಗುಣ, ಋಣ ನನ್ನಲ್ಲಿ ಬೆರೆತುಹೋಗಿದೆ. ಅಷ್ಟು ಸುಲಭವಾಗಿ ಈ ಮಣ್ಣಿನಿಂದ ನನ್ನನ್ನು ಬೇರ್ಪಡಿಸಲಾಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಭಾವುಕರಾಗಿ ನುಡಿದಿದ್ದಾರೆ. ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ನಟ ದರ್ಶನ್(Darshan) ಚಿತ್ರರಂಗ ಪ್ರವೇಶಿಸಿ 25 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ 'ಬೆಳ್ಳಿ ಪರ್ವ ಡಿ-25' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಮೂಲಕ ಮತ್ತೆ ಇಂಡಿಯಾದಲ್ಲಿ ಮಂಡ್ಯ ಜಿಲ್ಲೆ ಸದ್ದು ಮಾಡಲಿದೆ. ಹಾಸನ, ಮಂಡ್ಯ ಟಿಕೆಟ್‌ಗೆ ಬಿಜೆಪಿ ಜೆಡಿಎಸ್‌ನಲ್ಲಿ ಪೈಪೋಟಿ ಶುರುವಾಗಿದೆ. ಇತ್ತ ಮಂಡ್ಯ ನಂದೇ ಎಂದು ಸಂಸದೆ ಸುಮಲತಾ ಶಪಥ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Narendra modi: 3ನೇ ಬಾರಿ ಅಧಿಕಾರ, 400 ಟಾರ್ಗೆಟ್..! ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಪಾಠ !