
Narendra modi: 3ನೇ ಬಾರಿ ಅಧಿಕಾರ, 400 ಟಾರ್ಗೆಟ್..! ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಪಾಠ !
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಮೋ ಕದನ ಕಹಳೆ..!
400 ಕ್ಷೇತ್ರ ಟಾರ್ಗೆಟ್, ಕಾರ್ಯಕರ್ತರಿಗೆ ಮೋದಿ ಪಾಠ!
ಮಿಷನ್ ಕಂಪ್ಲೀಟ್ ಮಾಡಲು ಕಾರ್ಯಕರ್ತರಿಗೆ ಟಾರ್ಗೆಟ್
ಲೋಕ ಕದನಕ್ಕೆ ಕೇಸರಿ ಪಡೆ ಸಮರಾಭ್ಯಾಸ ಮಾಡಿದ್ದು, ದೆಹಲಿಯಲ್ಲಿ(Delhi) ಬೃಹತ್ ಕಾರ್ಯಕಾರಿಣಿ ಸಭೆ(National executive meeting) ನಡೆಸಲಾಗಿದೆ. ಕಾರ್ಯಕರ್ತರಿಗೆ ಗೆಲುವಿನ ತಂತ್ರದ ಪಾಠವನ್ನು ಪ್ರಧಾನಿ ಮೋದಿ(Narendra Modi) ಮಾಡಿದ್ದಾರೆ. 400 ಕ್ಷೇತ್ರದ ಮಿಷನ್ ಕಂಪ್ಲೀಟ್ ಮಾಡಲು ಕಾರ್ಯಕರ್ತರಿಗೆ ಟಾರ್ಗೆಟ್ ನೀಡಲಾಗಿದೆ. ಅಧಿಕಾರದಾಸೆಗೆ 3ನೇ ಅವಕಾಶ ಕೇಳ್ತಿಲ್ಲ. ಅಭಿವೃದ್ಧಿಯೇ ಪರಮೋಧ್ಯೇಯ. ರಾಷ್ಟ್ರದ ಅಭಿವೃದ್ಧಿಗಾಗಿ ಸಂಕಲ್ಪ ತೊಟ್ಟಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 10 ವರ್ಷ ಭಾರತ ಭ್ರಷ್ಟಾಚಾರ, ಭಯೋತ್ಪಾದನೆ ಮುಕ್ತವಾಗಿತ್ತು. 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದೇವೆ. ನಾವು ರಾಷ್ಟ್ರನೀತಿಗೆ ಬದ್ಧವಾಗಿದ್ದೇವೆ. ರಾಜನೀತಿಗೆ ಅಲ್ಲ ಎಂದು ಮೋದಿ ಹೇಳಿದ್ದಾರೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: Mohamed Muizzu: ಡ್ರ್ಯಾಗನ್ ಸಾಲದ ಶೂಲಕ್ಕೆ ಮಾಲ್ಡೀವ್ಸ್ ವಿಲವಿಲ! ಮಾಲ್ಡೀವ್ಸ್ ದ್ವೀಪ ದಹನ.. ಏನೇನು ಗೊತ್ತಾ ಕಾರಣ..?