Asianet Suvarna News Asianet Suvarna News

ಕರ್ನಾಟಕ ಕುರುಕ್ಷೇತ್ರದಲ್ಲಿ ಇಂದು ನಿರ್ಣಾಯಕ ದಿನ: ಸುಧಾಮೂರ್ತಿ , ನಾರಾಯಣಮೂರ್ತಿ, ಬಿಎಸ್‌ವೈ ವೋಟಿಂಗ್‌

ಬಿರುಸುಗೊಂಡ ಕರುನಾಡಿನ ಮಹಾ ಮತದಾನ
ಸುಧಾಮೂರ್ತಿ, ನಾರಾಯಣಮೂರ್ತಿ ವೋಟಿಂಗ್‌
ಶಿಕಾರಿಪುರದಲ್ಲಿ ಬಿ.ಎಸ್‌.ಯಡಿಯೂರಪ್ಪ ಮತದಾನ

First Published May 10, 2023, 9:50 AM IST | Last Updated May 10, 2023, 10:17 AM IST

ಬೆಂಗಳೂರು: ಇಂದು ರಾಜ್ಯಾದ್ಯಂತ ಮತದಾನ ನಡೆಯುತ್ತಿದ್ದು, ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಶಿಕಾರಿಪುರದಲ್ಲಿ ಮತದಾನ ಮಾಡಿದ್ದಾರೆ. ಇಂದು 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 58,282 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೂ ಬೆಂಗಳೂರಿನಲ್ಲಿ ನಟ ರಮೇಶ್‌ ಅರವಿಂದ್‌, ನಟಿ ಅಮೂಲ್ಯ, ಸುಧಾಮೂರ್ತಿ, ನಾರಾಯಣಮೂರ್ತಿ, ರಾಜೀವ್‌ ಚಂದ್ರಶೇಖರ್‌ ಮತದಾನ ಮಾಡಿದ್ದಾರೆ. ಇಂದು ರಾಜ್ಯದಲ್ಲಿ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಂಗಳೂರಿನಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ, 389 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ: Karnataka Assembly Election ಮತದಾನಕ್ಕಾಗಿ ಊರಿಗೆ ಹೊರಟ ಜನ, ಬಸ್‌ ಸಿಗದೆ ಪರದಾಟ!

Video Top Stories