
ಮತ್ತೆ ಅಸಮಾಧಾನ ಸ್ಫೋಟ: ಭಾರತ್ ಜೋಡೋ ಸಭೆಗೆ ತೆರಳಲು ಸಿದ್ದರಾಮಯ್ಯ ನಿರಾಕರಣೆ
ಸಿದ್ದರಾಮಯ್ಯನವರ ಜನ್ಮದಿನದ ಅಮೃತಮಹೋತ್ಸವದಲ್ಲಿ ಬಹಿರಂಗ ವೇದಿಕೆ ಮೇಲೆ ತಾವು ಒಂದಾಗಿದ್ದೇವೆ ಎಂದು ಬಿಗಿದಪ್ಪಿಕೊಂಡಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮತ್ತೆ ಮುಸುಕಿನ ಗುದ್ದಾಟ ಶುರುವಾದಂತಿದೆ.
ಬೆಂಗಳೂರು, (ಸೆಪ್ಟೆಂಬರ್.14): ಸಿದ್ದರಾಮಯ್ಯನವರ ಜನ್ಮದಿನದ ಅಮೃತಮಹೋತ್ಸವದಲ್ಲಿ ಬಹಿರಂಗ ವೇದಿಕೆ ಮೇಲೆ ತಾವು ಒಂದಾಗಿದ್ದೇವೆ ಎಂದು ಬಿಗಿದಪ್ಪಿಕೊಂಡಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮತ್ತೆ ಮುಸುಕಿನ ಗುದ್ದಾಟ ಶುರುವಾದಂತಿದೆ.
Add Asianetnews Kannada as a Preferred Source

ರಾಹುಲ್ ಗಾಂಧಿ 'Bharat Jodo Yatra' ಬ್ಯಾನರ್ ನಲ್ಲಿ ಸಿದ್ದರಾಮಯ್ಯ ನಾಪತ್ತೆ!
ಹೌದು....ಭಾರತ್ ಜೋಡೋ ಯಾತ್ರೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರ ಮಧ್ಯೆ ಮತ್ತೆ ಅಂತರ ಸೃಷ್ಟಿಯಾಗಿದ್ದು, ಸಿದ್ದರಾಮಯ್ಯ ಬಣ ಬೇಸರಗೊಂಡಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಭಾರತ್ ಜೋಡೋ ಸಭೆಗೆ ತೆರಳಲು ನಿರಾಕರಿಸಿದ್ದಾರೆ.