ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಸುದ್ದಿಗೋಷ್ಠಿ ಕರೆಯಲಾಗಿದೆ. ಸುದ್ದಿಗೋಷ್ಠಿಗಾಗಿ ಹಾಕಿದ  ಬ್ಯಾನರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರ ಭಾವಚಿತ್ರ ಕಾಣೆಯಾಗಿದೆ. ಇದರಿಂದ ಸಿದ್ದರಾಮಯ್ಯರ ಅಭಿಮಾನಿನಿಗಳು ಅಸಮಾಧಾನಗೊಂಡ ಘಟನೆ ನಡೆದಿದೆ

ರಾಯಚೂರು (ಸೆ.12) : ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಸುದ್ದಿಗೋಷ್ಠಿ ಕರೆಯಲಾಗಿದೆ. ಸುದ್ದಿಗೋಷ್ಠಿಗಾಗಿ ಹಾಕಿದ ಬ್ಯಾನರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರ ಭಾವಚಿತ್ರ ಕಾಣೆಯಾಗಿದೆ. ಎಐಸಿಸಿ(AICC) ಕಾರ್ಯದರ್ಶಿ ರಾಹುಲ್ ಗಾಂಧಿ(Rahul Gandhi) ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆ(Bharat Jodo Yatra) ನಿಮಿತ್ತ ಡಿ.ಕೆ.ಶಿವಕುಮಾರ(D.K.Shivakumar) ಸ್ಥಳ ಪರಿಶೀಲನೆಗೆ ಆಗಮಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ಕರೆದಿದ್ದು, ಬ್ಯಾನರ್(Banner) ಹಾಕಲಾಗಿದೆ. ಆದರೆ, ಸ್ಥಳೀಯ ನಾಯಕರ ಕಣ್ತಪ್ಪಿನಿಂದ ಆಗಿದೆಯೋ ಅಥವಾ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆಯೋ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಭಾವಚಿತ್ರ ಮಾತ್ರ ಕೈಬಿಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೂ ಬ್ಯಾನರ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ಚರ್ ಖಂಡ್ರೆ(Eshwar Khandre), ಎನ್.ಎಸ್ .ಬೋಸರಾಜು(N.S.Bosaraju), ಮಾಜಿ ಸಚಿವ ಎಚ್. ಆಂಜನೇಯ(H.Anjaneya), ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ(Amaregowda Bhayyapur), ಮಾಜಿ ಶಾಸಕ ಹಂಪನಗೌಡ ಬಾದರ್ಲ,(Hampangowda badarli) ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್Basangowda Daddal, ಲಿಂಗಸೂಗೂರು ಶಾಸಕ ಡಿ.ಎಸ್. ಹೂಲಗೇರಿ(D.S.Holageri) , ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ(Basanagowda Turvihal) ಹಾಗೂ ಎಂಎಲ್ ಸಿ ಶರಣಗೌಡ ಭಯ್ಯಾಪೂರ ಮತ್ತು ಮಾಜಿ ಶಾಸಕರ ಫೋಟೋ ಗಳು ಬ್ಯಾನರ್ ನಲ್ಲಿ ಹಾಕಲಾಗಿದೆ. ಆದ್ರೆ ಪಕ್ಷದ ಮಾಜಿ ಸಿಎಂ ಫೋಟೋ ಕೈಬಿಟ್ಟಿದ್ದು ಸಿದ್ದರಾಮಯ್ಯ ಅಭಿಮಾನಿಗಳಿಗೆ ಬೇಸರವಾಗಿದೆ.

ಮೋದಿಯನ್ನ ಮಣಿಸೋಕೆ ರಾಹುಲ್ ಗಾಂಧಿ ಸಜ್ಜು, ಸಫಲವಾಗುತ್ತಾ‘ಭಾರತ್ ಜೋಡೋ ಯಾತ್ರೆ’ ?