
ಯಾರೇ ಬಂದರೂ ಕೋಲಾರ 'ಜೆಡಿಎಸ್ ಭದ್ರಕೋಟೆ': ಸಿದ್ದು ಹೇಳಿಕೆಗೆ ಶ್ರೀನಾಥ್ ತಿರುಗೇಟು
ಈ ಬಾರಿ ಕೋಲಾರದಿಂದಲೇ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದು, ಈ ವಿಚಾರವಾಗಿ ಜೆಡಿಎಸ್ ಅಭ್ಯರ್ಥಿ ತಿರುಗೇಟು ನೀಡಿದ್ದಾರೆ.
ಕೋಲಾರದಲ್ಲಿ ಜೆಡಿಎಸ್ಗೆ ಉತ್ತಮ ವಾತಾವರಣ ಇದೆ. ಯಾರೇ ಬಂದರೂ ಕೋಲಾರ ಜೆಡಿಎಸ್ ಭದ್ರಕೋಟೆ ಎಂದು ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಹೇಳಿದ್ದಾರೆ. ಪಂಚರತ್ನ ಯಾತ್ರೆಯಿಂದ ನಮ್ಮ ಜೆಡಿಎಸ್ ಪ್ರಬಲವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಬಿ ಟೀಂ ಎಂದು ಅಪಪ್ರಚಾರದಿಂದ ಕಳೆದ ಬಾರಿ ಮುಸ್ಲಿಂರು ಕೈ ಹಿಡಿದಿರಲಿಲ್ಲ. ಈಗ ಮುಸ್ಲಿಂ ಸಮುದಾಯಕ್ಕೂ ವಾಸ್ತವತೆ ಅರ್ಥವಾಗಿ ನಮ್ಮ ಪರವಾಗಿದ್ದಾರೆ ಎಂದು ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ