
ಸ್ಯಾಂಟ್ರೋ ರವಿ ಬೆನ್ನು ಬಿದ್ದ ಖಾಕಿ ಪಡೆ: ರಾಜಕಾರಣಿಗಳ ಮೇಲೆ ನಿಗಾ
ಮೈಸೂರು ಪೊಲೀಸರು ಸ್ಯಾಂಟ್ರೋ ರವಿಯ ಬೆನ್ನು ಬಿದ್ದಿದ್ದು, ಅವನ ಪತ್ತೆಗೆ ಬೆಂಗಳೂರು ಪೊಲೀಸರ ಸಹಾಯ ಕೇಳಿದ್ದಾರೆ.
ಸ್ಯಾಂಟ್ರೋ ರವಿಯ ಪತ್ತೆಗೆ ಮೈಸೂರು ಖಾಕಿ ಪಡೆ ಹುಡುಕಾಟ ನಡೆಸಿದ್ದು, ಮೈಸೂರು ಪೊಲೀಸರೊಂದಿಗೆ ಸಿಬಿಐ ತಂಡದಿಂದ ಕೂಡ ಕಾರ್ಯಾಚರಣೆ ನಡೆದಿದೆ. ಸ್ಯಾಂಟ್ರೋ ರವಿ ಜತೆ ಸಂಪರ್ಕದಲ್ಲಿರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮೇಲೆ ನಿಗಾ ಇಡಲಾಗಿದೆ. ನಗರದ ಕೇಂದ್ರ ಭಾಗದಲ್ಲಿರೋ ಪ್ರಮುಖ ವಿಲ್ಲಾಗಳಲ್ಲಿ ಪೊಲೀಸ್ ಪರಿಶೀಲನೆ ನಡೆಸಿದ್ದು, ಸ್ಯಾಂಟ್ರೋ ರವಿ ಸಹಾಯ ಪಡೆದ ಅಧಿಕಾರಿಗಳ ಮೇಲೂ ಖಾಕಿ ಕಣ್ಣು ಇಟ್ಟಿದೆ. ಇತ್ತೀಚೆಗೆ ರವಿ ಸಹಾಯದಿಂದ ವರ್ಗಾವಣೆಯಾಗಿದ್ದ ಕೆಲವು ಅಧಿಕಾರಿಗಳು ಸೇರಿ ರವಿಯ ಇಂಚಿಂಚೂ ಜಾಲ ಜಾಲಾಡುತ್ತಿದ್ದಾರೆ ಮೈಸೂರು ಪೊಲೀಸರು.
Add Asianetnews Kannada as a Preferred Source
