Asianet Suvarna News Asianet Suvarna News

ಸಿಂದಗಿ ಬೈಎಲೆಕ್ಷನ್‌: ಜೆಡಿಎಸ್‌ ಪಕ್ಷದಿಂದ ದೂರವಾದ ಮನಗೂಳಿ ಕುಟುಂಬ

*  ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷ ಸೇರಿದ್ದ ಅಶೋಕ್‌ ಮನಗೂಳಿ 
*  ಜೆಡಿಎಸ್‌ ಪಕ್ಷದಿಂದ ದೂರವಾದ ಮನಗೂಳಿ ಕುಟುಂಬ 
*  ಸಿಂದಗಿ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಯಾದ ಅಶೋಕ್‌ 
 

ಸಿಂದಗಿ(ಅ.08): ಸಿಂದಗಿ ಬೈಎಲೆಕ್ಷನ್‌ ಕಣದಲ್ಲಿ ಜೆಡಿಎಸ್‌ಗೆ ಬಿಗ್‌ ಶಾಕ್‌ ತಟ್ಟಿದೆ. ಹೌದು, ಜೆಡಿಎಸ್‌ ಪಕ್ಷದಿಂದ ಮನಗೂಳಿ ಕುಟುಂಬ ದೂರವಾಗಿದೆ. ಇತ್ತೀಚೆಗಷ್ಟೇ ದಿ. ಮನಗೂಳಿ ಅವರ ಪುತ್ರ ಅಶೋಕ್‌ ಮನಗೂಳಿ ಅವರು ಕಾಂಗ್ರೆಸ್‌ ಪಕ್ಷ ಸೇರಿದ್ದರು. ಈಗ ಮನಗೂಳಿ ಅವರ ಕಿರಿಯ ಪುತ್ರ ಶಾಂತವೀರ ಮನಗೂಳಿ ಅವರೂ ಕೂಡ ಜೆಡಿಎಸ್‌ಗೆ ಗುಡ್‌ಬೈ ಹೇಳಿದ್ದಾರೆ. ಈ ಮೂಲಕ ಮನಗೂಳಿ ಕುಟುಂಬ ಜೆಡಿಎಸ್‌ ಪಕ್ಷದಿಂದ ದೂರವಾಗುತ್ತಿದೆ. ಅಶೋಕ್‌ ಮನಗೂಳಿ ಅವರು ಸಿಂದಗಿ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

ಸ್ವಿಗ್ಗಿ ಬಾಯ್ಸ್ ವೇಷ ಧರಿಸಿ ಗಾಂಜಾ ಸಪ್ಲೈ ಗ್ಯಾಂಗ್ ಅಂದರ್, ಎನ್‌ಸಿಬಿಯಿಂದ ರೋಚಕ ಕಾರ್ಯಾಚರಣೆ 

Video Top Stories