Asianet Suvarna News Asianet Suvarna News

Narayanasa Bhandage: ರಾಜ್ಯಸಭಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ನಾರಾಯಣಸಾ ಭಾಂಡಗೆ ಆಯ್ಕೆಗೆ ಕಾರಣಗಳೇನು ?

ನಾರಾಯಣ ಭಾಂಡ ರಾಜ್ಯಸಭೆ ಅಭ್ಯರ್ಥಿ 
17ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್ ಸೇರ್ಪಡೆ
40 ವರ್ಷಗಳಿಂದ ಆರ್‌ಎಸ್ಎಸ್‌ನಲ್ಲಿ ಕೆಲಸ

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ಕರ್ನಾಟಕದಿಂದ(Karnataka) ಬಿಜೆಪಿ(BJP) ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡಿದೆ. ರಾಜ್ಯದಿಂದ ನಾರಾಯಣಸಾ ಭಾಂಡಗೆಗೆ(Narayanasa Bhandage) ಬಿಜೆಪಿ ಟಿಕೆಟ್ ಕೊಡಲಾಗಿದೆ. ಮಾಜಿ ಎಂಎಲ್‌ಸಿ ನಾರಾಯಣಸಾ ಭಾಂಡಗೆ ಟಿಕೆಟ್ ನೀಡಿದ್ದು, ಬಾಗಲಕೋಟೆ ಮೂಲದ ಒಬಿಸಿ ಸಮುದಾಯಕ್ಕೆ ಸೇರಿದ ನಾರಾಯಣಸಾ ಭಾಂಡನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಕಟ್ಟಾ ಹಿಂದುತ್ವವಾದಿಗೆ ಬಿಜೆಪಿ ರಾಜ್ಯಸಭಾ ಟಿಕೆಟ್(Rajyasabha Ticket) ಒಲಿದಿದೆ. ಬಿಜೆಪಿ ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿದ್ದ ನಾರಾಯಣಸಾ ಭಾಂಡಗೆ, ಆರ್‌ಎಸ್‌ಎಸ್‌ನಲ್ಲಿ ಸಕ್ರೀಯವಾಗಿದ್ದರು. 40 ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದ್ದಾರೆ. 1973ರಲ್ಲಿ ನಾರಾಯಣಸಾ ಭಾಂಡಗೆ ಜನಸಂಘ ಸೇರಿದ್ದರು. 

ಇದನ್ನೂ ವೀಕ್ಷಿಸಿ:  Narendra Modi: ನಯಾ ಕಾಶ್ಮೀರದ ಬಗ್ಗೆ ಮೋದಿ ವರ್ಣನೆ..! 25 ವರ್ಷಗಳಲ್ಲಿ ವಿಕಸಿತ ಭಾರತದ ಸಂಕಲ್ಪ..!