Asianet Suvarna News Asianet Suvarna News

ನಾನು ಗೆದ್ದರೇ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ, ನನ್ನ ಸೋಲಿಸಲು ಆಗುವುದಿಲ್ಲ: ಪ್ರತಾಪ್‌ ಸಿಂಹ

ಮೈಸೂರು ಸಂಸದ ಪ್ರತಾಪ್‌ ಸಿಂಹಗೆ ಟಿಕೆಟ್‌ ಸಿಗಲ್ಲ ಎಂಬ ಟೆನ್ಷನ್‌ ಶುರುವಾಗಿದೆ. ಅಲ್ಲದೇ ಅಸೂಯೆಯಿಂದ ಕೆಲವರು ನನ್ನ ವಿರುದ್ಧ ಮಾತನಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಮೈಸೂರು ಸಂಸದ ಪ್ರತಾಪ್‌ ಸಿಂಹಗೆ(Pratap Simha) ಲೋಕಸಭಾ(Loksabha) ಟಿಕೆಟ್‌ ಮಿಸ್‌ ಆಗುವ ಟೆನ್ಷನ್‌ ಶುರುವಾಗಿದೆ. ಅಲ್ಲದೇ ಅವರಿಗೆ ಟಿಕೆಟ್‌(Ticket) ನೀಡದಂತೆ ತಪ್ಪಿಸಲು ಪಕ್ಷದೊಳಗೆ ಮಸಲತ್ತು ನಡೆಯುತ್ತಿದೆ ಎನ್ನಲಾಗ್ತಿದೆ. ಈ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ನನ್ನ ಪರ್ಫಾಮೆನ್ಸ್‌ ಚೆನ್ನಾಗಿದೆ, ಖಂಡಿತಾ ಟಿಕೆಟ್‌ ಕೊಡ್ತಾರೆ. ಅಸೂಯೆಯಿಂದ ಕೆಲವರು ನನ್ನ ವಿರುದ್ಧ ಮಾತನಾಡುತ್ತಾರೆ. ನಾನು ಗೆದ್ದರೇ ಸಿದ್ದರಾಮಯ್ಯ ಅವರ ಸೀಟು ಅಲುಗಾಡುತ್ತೆ. ಪ್ರತಾಪ್‌ ಸಿಂಹ ಸೋಲಿಸಲು ಆಗುವುದಿಲ್ಲ ಎಂದು ಕಾಂಗ್ರೆಸ್‌ಗೆ ಗೊತ್ತಿದೆ. ಕಾಂಗ್ರೆಸ್‌ಗೆ(Congress) ಬಿಜೆಪಿ(BJP) ಹೇಗೆ ಸಪೋರ್ಟ್‌ ಮಾಡುತ್ತೆ. ತಾಯಿ ಚಾಮುಂಡಿ ನನ್ನ ಕೈ ಬಿಡಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Weekly-Horoscope: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಈ ವಾರದ ವಿಶೇಷತೆ ಏನು ಗೊತ್ತಾ?

Video Top Stories