ಕರುನಾಡ ಯುದ್ಧವೀರರ ಮುಂದೆ ಟಾರ್ಗೆಟ್ 7 ಚಾಲೆಂಜ್: ದಕ್ಷಿಣಾಪಥೇಶ್ವರರ ದಂಡಯಾತ್ರೆಗೆ ರೆಡಿಯಾಗಿದೆ ರಣವ್ಯೂಹ !

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಆಟಕ್ಕೆ ರೆಡಿಯಾಗ್ತಿದ್ದಾರೆ. ಕರ್ನಾಟಕ ಗೆದ್ದ ಜೋಡೆತ್ತು ಜೋಡಿ, ಮಹಾಸಾಹಸವೊಂದಕ್ಕೆ ರೆಡಿಯಾಗ್ತಿದೆ. 

Share this Video
  • FB
  • Linkdin
  • Whatsapp

ಕರ್ನಾಟಕ ಗೆದ್ದ ಭಲೇ ಜೋಡಿಯ ಮುಂದೆ ಮತ್ತೊಂದು ಚಾಲೆಂಜ್. ಇದು ಜೋಡೆತ್ತು ಜೋಡಿಯ ಮುಂದಿರೋ 7 ಟಾರ್ಗೆಟ್. ಕರ್ನಾಟಕ ಕುರುಕ್ಷೇತ್ರದಲ್ಲಿ ಉತ್ತರಾಪಥೇಶ್ವರರನ್ನು ಕಟ್ಟಿ ಹಾಕಿ ಕಾಂಗ್ರೆಸ್'ಗೆ ಪ್ರಚಂಡ ವಿಜಯ ತಂದುಕೊಟ್ಟ ದಕ್ಷಿಣದ ಭಲೇ ಜೋಡಿ ದಕ್ಷಿಣ ದಂಡಯಾತ್ರೆಗೆ ರೆಡಿಯಾಗ್ತಾ ಇದೆ. 7ರ ಸವಾಲು ಬೆನ್ನಟ್ಟಿ ದಂಡಯಾತ್ರೆ ಹೊರಡಲಿದೆ ಕುರುಕ್ಷೇತ್ರದಲ್ಲಿ ಚರಿತ್ರೆ ಸೃಷ್ಠಿಸಿದ ಸಿದ್ದು-ಡಿಕೆ ಯಶೋ ಜೋಡಿ. ಕಾಂಗ್ರೆಸ್ ನೊಗ ಎಳೆದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್, ಕೈ ಪಕ್ಷವನ್ನು ಅಧಿಕಾರದ ಗದ್ದುಗೆ ಏರಿಸಿದ್ದಾರೆ. ಅದಕ್ಕೆ ಸಿಕ್ಕ ಬಳುವಳಿ ಎಂಬಂತೆ ಸಿದ್ದು ಮುಖ್ಯಮಂತ್ರಿ ಪಟ್ಟದಲ್ಲಿ ವಿರಾಜಮಾನರಾಗಿದ್ರೆ, ಡಿಕೆಶಿ ಡಿಸಿಎಂ ಕುರ್ಚಿಯಲ್ಲಿ ಕೂತಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಸಿದ್ದು ಡಿಕೆಶಿ ಸರ್ಕಾರದ ಮುಂದೆ ಸಾಲು-ಸಾಲು ಸವಾಲ್‌: ಕೊಟ್ಟಿರೋ ಗ್ಯಾರೆಂಟಿ ಪೂರೈಸೋಕೆ ಏನಿದೆ ಮಾರ್ಗ ?

Related Video