
Border row:ಕನ್ನಡಿಗರ ಪ್ರತಿಭಟನೆಗೆ ಹೆದರಿದ ಮಹಾರಾಷ್ಟ್ರ ಸಚಿವರು?: ಬೆಳಗಾವಿ ಭೇಟಿ ದಿಢೀರ್ ರದ್ದು
ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ದಿಢೀರ್ ರದ್ದಾಗಿದ್ದು, ಇಂದು ಬೆಳಗಾವಿಗೆ ಬರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ದಿಢೀರ್ ರದ್ದಾಗಿದ್ದು, ಕನ್ನಡಿಗರ ಪ್ರತಿಭಟನೆಗೆ ಹೆದರಿದ್ರಾ ಮಹಾ ಸಚಿವರು ಎಂಬ ಪ್ರಶ್ನೆ ಮೂಡಿದೆ. ಡಿ. 3ರಂದು ಬೆಳಗಾವಿಗೆ ಭೇಟಿ ನೀಡಲು ನಿರ್ಧರಿಸಿದ್ದೆವು. ದಲಿತ ಸಂಘಟನೆಗಳು ಡಿ. 6ರಂದು ಬರುವಂತೆ ಆಹ್ವಾನಿಸಿದ್ದವು. ಹೀಗಾಗಿ ಇಂದು ಬೆಳಗಾವಿಗೆ ತೆರಳಲು ನಿರ್ಧರಿಸಿದ್ದೆವು. ಆದರೆ ಅಂಬೇಡ್ಕರ್ ಪರಿನಿರ್ವಾಣ ದಿನ ಗಲಾಟೆ ನಡೆಯಬಾರದು. ಅಹಿತಕರ ಘಟನೆ ನಡೆಯಬಾರದು. ಹಾಗಾಗಿ ಬರುತ್ತಿಲ್ಲ ಎಂದು ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಶಂಭುರಾಯ ದೇಸಾಯಿ ಸ್ಪಷ್ಟನೆ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ