ಶಿವರಾಮೇಗೌಡಗೆ ನಾಗಮಂಗಲ ಬಿಜೆಪಿ ಟಿಕೆಟ್ ಫಿಕ್ಸ್? ಬಿಜೆಪಿಗೆ ತಲೆನೋವಾದ ಫೈಟರ್ ರವಿ ನಡೆ!
ಜೆಡಿಎಸ್ನಿಂದ ಉಚ್ಛಾನೆಗೊಂಡಿದ್ದ ಮಾಜಿ ಸಂಸದ ಶಿವರಾಮೇಗೌಡ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮಂಡ್ಯದ ನಾಗಮಂಗಲ ಕ್ಷೇತ್ರದ ಟಿಕೆಟ್ ಫಿಕ್ಸ್ ಆಗಿದೆ. ಇನ್ನು ಬಿಜೆಪಿಯಿಂದ ಸ್ಪರ್ಧಿಸುವುದಾಗಿ ತಯಾರಿ ನಡೆಸಿದ್ದ ಫೈಟರ್ ರವಿಗೆ ಶಾಕ್ ಆಗಿದೆ.
ಮಂಡ್ಯ (ಮಾ.23): ಜೆಡಿಎಸ್ನಿಂದ ಉಚ್ಛಾನೆಗೊಂಡಿದ್ದ ಮಾಜಿ ಸಂಸದ ಶಿವರಾಮೇಗೌಡ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮಂಡ್ಯದ ನಾಗಮಂಗಲ ಕ್ಷೇತ್ರದ ಟಿಕೆಟ್ ಫಿಕ್ಸ್ ಆಗಿದೆ. ಇನ್ನು ಬಿಜೆಪಿಯಿಂದ ಸ್ಪರ್ಧಿಸುವುದಾಗಿ ತಯಾರಿ ನಡೆಸಿದ್ದ ಫೈಟರ್ ರವಿಗೆ ಶಾಕ್ ಆಗಿದೆ. ಇದೀಗ ಬಂಡಾಯವಾದರೂ ಸರಿಯೇ ನನ್ನ ಸ್ಪರ್ಧೆ ಖಚಿತ ಅಂತ ಫೈಟರ್ ರವಿ ಹೇಳುತ್ತಿದ್ದು, ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. ಸಿಎಂ ಸೇರಿದಂತೆ ಬಿಜೆಪಿ ರಾಜ್ಯ ನಾಯಕನ್ನು ಕರೆಸಿ ನಾಗಮಂಗಲದಲ್ಲೇ ಬಿಜೆಪಿ ಸೇರಲು ಶಿವರಾಮೇಗೌಡ ತಯಾರಿ ನಡೆಸಿದ್ದಾರೆ. ನಾಗಮಂಗಲ ಟಿಕೆಟ್ ಸಿಗುವ ಭರವಸೆಯಲ್ಲಿಯೇ ಫೈಟರ್ ರವಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ. ಕ್ಷೇತ್ರದಲ್ಲಿ ಹಲವು ಬಿಜೆಪಿ ಕಾರ್ಯಕ್ರಮಗಳನ್ನು ರವಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದ. ಇದೀಗ ಶಿವರಾಮೇಗೌಡ ಎಂಟ್ರಿಯಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಇತ್ತ ಟಿಕೆಟ್ ಸಿಗುವುದು ಅನುಮಾನ ಎಂದು ಗೊತ್ತಾಗುತ್ತಿದ್ದಂತೆ ಬಂಡಾಯವೇಳಲು ಫೈಟರ್ ರವಿ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಫೈಟರ್ ರವಿ, ಶಾಸಕ ಸುರೇಶಗೌಡ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಇನ್ನು ನಾನು ಬೇರೆಯವರ ಗೆಲ್ಲಿಸಲು ಅಥವಾ ಸೋಲಿಸಲು ರಾಜಕಾರಣಕ್ಕೆ ಬಂದಿಲ್ಲ. ನಾನು ಗೆಲ್ಲುವುದ್ದಕ್ಕಾಗಿಯೇ ರಾಜಕಾರಣಕ್ಕೆ ಬಂದ್ದಿದ್ದೇನೆ ಎಂದು ಫೈಟರ್ ರವಿ ಹೇಳಿದ್ದಾರೆ.