Asianet Suvarna News Asianet Suvarna News

ನಾನು ವಿಶ್ರಾಂತಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ: ಹೆಚ್‌ಡಿಕೆ

ಹೆಚ್‌.ಡಿ. ಕುಮಾರಸ್ವಾಮಿ ಇಂದಿನಿಂದ ಪ್ರಚಾರ
ಅನಾರೋಗ್ಯದ ನಡುವೆಯೂ ಹೆಚ್‌ಡಿಕೆ ಮತಶಿಕಾರಿ
ಜೆಡಿಎಸ್‌ ಅಭ್ಯರ್ಥಿಗಳ ಪರ ಹೆಚ್‌ಡಿಕೆ ಕ್ಯಾಂಪೇನ್‌

First Published Apr 25, 2023, 2:57 PM IST | Last Updated Apr 25, 2023, 2:57 PM IST

ಬೆಂಗಳೂರು: ಅನಾರೋಗ್ಯ ಹಿನ್ನೆಲೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ವೈದ್ಯರು ಸಹ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಹೀಗಿದ್ದರೂ ಇಂದಿನಿಂದ ಹೆಚ್‌ಡಿಕೆ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ವರುಣ, ಕೆ.ಆರ್‌. ಕ್ಷೇತ್ರ, ಚಾಮರಾಜ ಕ್ಷೇತ್ರಗಳಲ್ಲಿ ಕ್ಯಾಂಪೇನ್‌ ಮಾಡಲಿದ್ದಾರೆ. ಇಂದಿನಿಂದ ಮೇ.8ರ ತನಕ ನಿರಂತರವಾಗಿ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಹೆಚ್‌.ಡಿ. ಕುಮಾರಸ್ವಾಮಿ, ವೈದ್ಯರ ಸಲಹೆಯಂತೆ ನಾನು ವಿಶ್ರಾಂತಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಇವತ್ತು ಮೂರು ಕಡೆ ಪ್ರಚಾರ ಮಾಡುತ್ತೇನೆ. ದೇವೇಗೌಡರಿಗೆ ನನ್ನ ಆರೋಗ್ಯದ ಬಗ್ಗೆ ಚಿಂತೆ ಶುರವಾಗಿದೆ. ಹಾಗಾಗಿ ಅವರೇ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ನಾಲ್ಕು ಜನರನ್ನ ಕಟ್ಟಿಕೊಂಡು ಗಲಾಟೆ ಮಾಡಿದ್ರೆ ನಾನು ಹೆದರಲ್ಲ: ರಘು ಆಚಾರ್‌