Asianet Suvarna News Asianet Suvarna News

ಸಚಿವ ಸಂಪುಟಕ್ಕೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ, ಸಿಎಂ ವಿರುದ್ಧ ಸಿಡಿದೆದ್ದ ಓಲೇಕಾರ್

ಸಚಿವ ಸಂಪುಟಕ್ಕೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಸಿಎಂ ವಿರುದ್ಧ ಶಾಸಕ ನೆಹರೂ ಓಲೇಕಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಆ. 04): ಸಚಿವ ಸಂಪುಟಕ್ಕೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಸಿಎಂ ವಿರುದ್ಧ ಶಾಸಕ ನೆಹರೂ ಓಲೇಕಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನನಗೆ ಸಚಿವ ಸ್ಥಾನ ತಪ್ಪಿಸಿದ್ದೇ ಬೊಮ್ಮಾಯಿ. ವಸೂಲಿಗಾರರು, ವಂಚಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಹೈ ಕಮಾಂಡ್ ಒಪ್ಪಿದ್ರೂ ಸಿಎಂ ನನಗೆ ಮಂತ್ರಿಗಿರಿ ತಪ್ಪಿಸಿದ್ದಾರೆ. ಸಿಎಂ ಬೊಮ್ಮಾಯಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ' ಎಂದು ಸಿಎಂ ವಿರುದ್ಧ ಹಾವೇರಿ ಶಾಸಕ ಓಲೇಕಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಹುದ್ದೆ ಇಲ್ಲ, ಬೇಡ ಅಂದಿದ್ಯಾಕೆ ಹೈಕಮಾಂಡ್..?