Asianet Suvarna News Asianet Suvarna News

Ground Report: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಟಿಕೆಟ್‌ಗೆ ಹೆಚ್ಚಿದ ಬೇಡಿಕೆ: ಕಾಂಗ್ರೆಸ್-ಜೆಡಿಎಸ್‌ ಸಮಬಲ ಹೋರಾಟ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಪಾಲಿಟಿಕಲ್ ಗ್ರೌಂಡ್ ರಿಪೋರ್ಟ್ ಹೀಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ಹಾಲಿಗಳಿಗೆ ಮಣೆ ಹಾಕಲಾಗುತ್ತಿದೆ. ಹಾಲಿ ಶಾಸಕರಿಗೆ ಆಯಾ ಪಕ್ಷಗಳ ಟಿಕೆಟ್‌ ಬಹುತೇಕ ಖಾತ್ರಿ ಇದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮಬಲದ ಹೋರಾಟವನ್ನು ನಡೆಸಲು ಸಜ್ಜಾಗಿವೆ. 5 ಕ್ಷೇತ್ರಗಳ ಹಾಲಿ ಶಾಸಕರಿಗೆ ಆಯಾ ಪಕ್ಷಗಳ ಟಿಕೆಟ್‌ ಬಹುತೇಕ ಪಕ್ಕ ಆಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌'ಗಿಂತ ಬಿಜೆಪಿ ಟಿಕೆಟ್‌ ಬೇಡಿಕೆ ಹೆಚ್ಚಾಗಿದೆ. ಈ ಬಾರಿ ಸುಧಾಕರ್‌ ಬಿಜೆಪಿಯಿಂದಲೇ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಮಾಜಿ ಶಾಸಕ ಕೆ‌.ಪಿ ಬಚ್ಚೇಗೌಡ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಚಿಂತಾಮಣಿಯಲ್ಲಿ ಶಾಸಕ ಸ್ಥಾನಕ್ಕೆ   ರೆಡ್ಡಿಗಳ ಕಾಳಗ ನಡೆಯಲಿದೆ. ಗೌರಿಬಿದನೂರಿನಲ್ಲಿ ಶಿವಶಂಕರ ರೆಡ್ಡಿ  ಕಟ್ಟಿಹಾಕಲು ಯತ್ನ ನಡೆದಿದೆ. ಶಿಡ್ಲಘಟ್ಟದಲ್ಲಿ ರಾಜಣ್ಣನಿಗೆ ಬಿಜೆಪಿ ಮಣೆ ಹಾಕಲಿದೆ.

ಒಂದು ವೋಟ್ ಮಾಡೋಕೆ ಎರಡೂವರೆ ಗಂಟೆ ಬೇಕಾ?: ಮೋದಿ ವಿರುದ್ಧ ಚುನಾವಣಾ ಅಯ ...

Video Top Stories