Asianet Suvarna News Asianet Suvarna News

ಕಮಲ ಪಾಳೆಯ ವಿರುದ್ಧ ಕಾಂಗ್ರೆಸ್ ಬ್ರಹ್ಮಾಸ್ತ್ರ: ಪ್ರಬಲ ನಾಯಕರಿಗೆ ಚೆಕ್ ಮೇಟ್?

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಐದು ವರ್ಷಗಳ ಹಿಂದೆ ಬಿಜೆಪಿ ಹೂಡಿದ್ದ ಅಸ್ತ್ರವನ್ನೇ ಈಗ ಕಾಂಗ್ರೆಸ್ ಪ್ರಯೋಗಿಸಲು ಮುಂದಾಗಿದೆ.
 

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಕಣ ರಂಗೇರಿದ್ದು, ಸೋಲು ಗೆಲುವಿನ ಲೆಕ್ಕ ಶುರುವಾಗಿದೆ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಅನ್ನುವ ವಿಶ್ಲೇಷಣೆಗಳು ಟ್ರೆಂಡ್ ಕಾಯ್ದುಕೊಂಡಿವೆ. ಎಲ್ಲಾ ಪಕ್ಷಗಳಿಗೂ ಅಧಿಕಾರವೊಂದೇ ಗುರಿ. ಕರ್ನಾಟಕದಲ್ಲಿ ಬಲಿಷ್ಠವಾಗಿ ಕಾಣ್ತಿರೋದು ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್. ಐದು ವರ್ಷಗಳ ಹಿಂದೆ ಬಿಜೆಪಿ ಹೂಡಿದ್ದ ಅಸ್ತ್ರವನ್ನೇ ಈಗ ಬಿಜೆಪಿ ವಿರುದ್ಧ ಪ್ರಯೋಗಿಸೋಕೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಏನದು ಕಾಂಗ್ರೆಸ್ ಬಳಿಯಿರೋ ಕಮಲಾಸ್ತ್ರ..? ಅದೊಂದು ಅಸ್ತ್ರ ಬಿಜೆಪಿ ನಾಯಕರನ್ನು ಹೇಗೆ ಕಟ್ಟಿ ಹಾಕಬಲ್ಲದು..? ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಬೀದಿಗೆ ಬಂತು ಐಎಎಸ್ & ಐಪಿಎಸ್ ಅಧಿಕಾರಿಗಳ ಟಾಕ್ ವಾರ್: ಕೊನೆ ಯಾವಾಗ?

Video Top Stories