Asianet Suvarna News Asianet Suvarna News

ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಸಿಎಂ ಮಾಸ್ಟರ್ ಪ್ಲಾನ್: ರಾಜ್ಯಕ್ಕೆ ಬರಲಿದ್ದಾರೆ ಪಂಚ ಪಾಂಡವರು

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಅಖಾಡ ರಂಗೇರಿದ್ದು, ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸಿದೆ.
 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದ್ದಿಲ್ಲದೆ ಕರ್ನಾಟಕ ಕುರುಕ್ಷೇತ್ರಕ್ಕೆ ಸಜ್ಜಾಗಿದ್ದು, ಪಂಚ ಪಾಂಡವರನ್ನೇ ಚುನಾವಣಾ ರಣರಂಗದ  ಅಖಾಡಕ್ಕಿಳಿಸುತ್ತಿದ್ದಾರೆ. ಶತಾಯಗತಾಯ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಪ್ಲಾನ್‌ ನಡೆದಿದ್ದು, ಕೇಂದ್ರದಿಂದಲೇ ಐವರು ಸ್ಟಾರ್‌ ನಾಯಕರನ್ನು ರಾಜ್ಯಕ್ಕೆ ಕರೆತರಲು ಸ್ಕೆಚ್‌ ಹಾಕಲಾಗಿದೆ. ಪಂಚ ಪಾಂಡವರ ಮೂಲಕ ಪಾಂಚಜನ್ಯ ಮೊಳಗಿಸಲು ಸಿಎಂ ತಯಾರಿ ನಡೆಸಿದ್ದಾರೆ. ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ, ರಾಜನಾಥ್‌ ಸಿಂಗ್‌ ಹಾಗೂ ಯೋಗಿ ಆದಿತ್ಯನಾಥ್‌ ಅವರನ್ನು ಕರೆಸಿ ರಾಜ್ಯದಲ್ಲಿ ಹಲವು ಕಾರ್ಯಕ್ರಮಕ್ಕೆ ಪ್ಲಾನ್‌ ರೂಪಿಸಲಾಗಿದೆ. ಮೊದಲು ಇಲಾಖಾ ಕಾರ್ಯಕ್ರಮಕ್ಕೆ ಕೇಂದ್ರ ಮಂತ್ರಿಗಳನ್ನು ಕರೆಸೋದು. ಬಳಿಕ ರಾಜಕೀಯ ಕಾರ್ಯಕ್ರಮಗಳಿಗೆ ಕರೆಸುವ ಪ್ಲಾನ್‌ ನಡೆದಿದೆ. ಜನವರಿ ಹಾಗೂ ಫೆಬ್ರವರಿಯಲ್ಲಿ ಕೇಂದ್ರ ನಾಯಕರ ಬ್ಯಾಕ್‌ ಟು ಬ್ಯಾಕ್‌ ಕಾರ್ಯಕ್ರಮ ಇರಲಿದ್ದು, ಕೇಂದ್ರ ಮತ್ತು ರಾಜ್ಯದ ಯೋಜನೆಗಳನ್ನು ಮುಂದಿಟ್ಟು ಮತಬೇಟಿ ಶುರು ಮಾಡಲಿದ್ದಾರೆ.

ಮನೆಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ರಾಬರ್ಸ್: ಸಿನಿಮೀಯ ರೀತಿಯಲ್ಲಿ ಸೆರೆಯಾಗಿದ್ದು ಹೇಗೆ?

Video Top Stories