Asianet Suvarna News Asianet Suvarna News

ಕರ್ನಾಟಕದಲ್ಲಿ ಸ್ನೇಹ ಸಾಧಿಸ್ತಾರಾ ಬಿಜೆಪಿ -ಜೆಡಿಎಸ್..?: ದೆಹಲಿಗೆ ಕುಮಾರಸ್ವಾಮಿ ಹೋಗ್ತಿರೋದೇಕೆ..?

ಮೈತ್ರಿ ಬಗ್ಗೆ ಸುಳಿವು ಕೊಡದ ಉಭಯ ಪಕ್ಷಗಳು
ಚರ್ಚೆಯನ್ನು ತಳ್ಳಿ ಹಾಕದ ಮಾಜಿ ಸಿಎಂ ಹೆಚ್‌ಡಿಕೆ
ಬಿಜೆಪಿ ಜೆಡಿಎಸ್ ಮೈತ್ರಿ ಜನರ ಭಾವನೆ ಎಂದ ದಳಪತಿ

First Published Jul 16, 2023, 12:43 PM IST | Last Updated Jul 16, 2023, 12:43 PM IST

ಲೋಕಸಭಾ ಚುನಾವಣೆಗೆ(Loksabha Election) ಸಮರಾಭ್ಯಾಸ ಎಲ್ಲಾ ಪಕ್ಷಗಳಿಂದ ಶುರುವಾಗಿದೆ. ಬಿಜೆಪಿಗೆ(BJP) ಕರ್ನಾಟಕ ವಿಧಾನಸಭಾ ಎಲೆಕ್ಷನ್ ಕೊಂಚ ವಿಚಲಿತ ಮಾಡಿದಂತಿದೆ. ಮೋದಿ(Modi) ತಮ್ಮ ಗೇಮ್ ಪ್ಲಾನ್ ಚೇಂಜ್ ಮಾಡಿಕೊಂಡು ಲೋಕಸಭೆಯನ್ನ ಎದುರಿಸೋ ಸೂಚನೆ ಕೊಟ್ಟಿದ್ದಾರೆ. ದೇಶಾದ್ಯಂತ ಪ್ರಾದೇಶಿಕ ಪಕ್ಷಗಳನ್ನ ಎನ್ ಡಿ ಎ ಮೈತ್ರಿ ಕೂಟಕ್ಕೆ ಬನ್ನಿ ಅಂತ ಆಮಂತ್ರಣ ಮಾಡ್ತಾ ಇರೋದು ಒಂದು ಕಡೆ. ಕರ್ನಾಟಕದಲ್ಲಿ ಜೆಡಿಎಸ್(JDS) ಜೊತೆಗೆ ಸ್ನೇಹ ಮಾಡಿಕೊಂಡು ಭಾರತದ ಮಹಾಚುನಾವಣೆಯನ್ನ ಎದುರಿಸೋಕೆ ಸಿದ್ಧರಾಗಿದ್ದು ಇನ್ನೊಂದು ಕಡೆ.ಭಾರತದ ಮಹಾ ಚುನಾವಣೆ ನಡೆಯಲಿದೆ. ಇದಕ್ಕೆ ಎಲ್ಲಾ ಪಕ್ಷಗಳು ರಣತಂತ್ರವನ್ನ ಹೂಡೋಕೆ ಶುರು ಮಾಡಿದಾವೆ. 10 ವರ್ಷಗಳ ನಂತರವಾದ್ರೂ ನಾವು ಗದ್ದುಗೆ ಏರ್ಬೇಕು ಅನ್ನೋದು ಕಾಂಗ್ರೆಸ್ ಕನಸು. ಮತ್ತೆ ಗೆದ್ದು ಬರಬೇಕು ಅನ್ನೋದು ಮೋದಿ ನೇತೃತ್ವದ ಬಿಜೆಪಿ ಶಪಥವಾಗಿದೆ.

ಇದನ್ನೂ ವೀಕ್ಷಿಸಿ:  ಕುಟುಂಬ ರಾಜಕಾರಣ ಕಳಂಕ ಮುಕ್ತಿಗೆ ಮುಂದಾದ ದಳಪತಿ: ನಮ್ಮ ಕುಟುಂಬದಿಂದ ಯಾರು ನಿಲ್ಲಲ್ಲ ಎಂದ ಹೆಚ್‌ಡಿಕೆ