Asianet Suvarna News Asianet Suvarna News

ರಣೋತ್ಸಾಹದಿಂದ ಅಬ್ಬರಿಸಿದ್ದ ಸಿದ್ದರಾಮಯ್ಯ ಈಗ ಸೈಲೆಂಟ್; ತೊಡೆ ತಟ್ಟಿ ನಿಂತಿದ್ದ ಟಗರು ತಣ್ಣಗಾಗಿದ್ದೇಕೆ?

ತೊಡೆ ತಟ್ಟಲು ಮುಂದಾಗಿದ್ದ ಸಿದ್ದು ತಣ್ಣಗಾಗಿದ್ದೇಕೆ..? “ಮಡಿಕೇರಿ ಚಲೋ” ಮುಂದೂಡಿಕೆ ಹಿಂದೆ ಕೈ ಅಂತರ್ಯುದ್ಧ..! ಸಿದ್ದು ರಣೋತ್ಸಾಹಕ್ಕೆ ಅವರು ಬ್ರೇಕ್ ಹಾಕಿದ್ದು ಹೇಗೆ ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸೈರಾ ಸಿದ್ದುಗೆ ಸೀಕ್ರೆಟ್ ಬ್ರೇಕ್.

ಬೆಂಗಳೂರು, (ಆಗಸ್ಟ್.25): ಆಗಸ್ಟ್ 26ಕ್ಕೆ ಕೊಡಗಿಗೆ ಮತ್ತೆ ಬರ್ತೀನಿ, ಅದೇನಾಗುತ್ತೋ ನೋಡೋಣ ಬಿಡೋಣ... ತಮ್ಮ ಮೇಲಿನ ಮೊಟ್ಟೆ ದಾಳಿಯ ವಿರುದ್ಧ ಸಿದ್ದರಾಮಯ್ಯನವರು ಅಬ್ಬರಿಸಿ ಬೊಬ್ಬಿರಿಸಿದ್ದ ಪರಿಯಿದು. ಆದ್ರೆ ರಣೋತ್ಸಾಹದಿಂದ ಹೆಜ್ಜೆ ಮುಂದಿಟ್ಟಿದ್ದ ಸಿದ್ದರಾಮಯ್ಯ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ. 

ನಮಗೂ ಮೊಟ್ಟೆ ಎಸೆಯಲು ಬರಲ್ವಾ?: ಸಿದ್ದರಾಮಯ್ಯ

ಕೊಡಗು ಚಲೋವನ್ನು ಮುಂದಕ್ಕೆ ಹಾಕಿದ್ದಾರೆ. ಸಿದ್ದರಾಮಯ್ಯನವರ ರಣಘೋಷಕ್ಕೆ ಬ್ರೇಕ್ ಹಾಕಿದ್ದು ಯಾರು ಗೊತ್ತಾ..? ಸೆಕ್ಷನ್ 144 ಅನ್ನೋದು ಕಣ್ಣಿಗೆ ಕಾಣೋ ಸತ್ಯ.. ಆದ್ರೆ ಕಣ್ಣಿಗೆ ಕಾಣದ ಸತ್ಯ ಬೇರೆಯೇ ಇದೆ. ಆ ನಿಗೂಢ ಸತ್ಯದ ಅನಾವರಣವೇ ಸೈರಾ ಸಿದ್ದುಗೆ ಸೀಕ್ರೆಟ್ ಬ್ರೇಕ್.

Video Top Stories