Asianet Suvarna News Asianet Suvarna News

ಜೆಡಿಎಸ್‌ ಪಾಳಯದಲ್ಲಿ ಮತ್ತೊಮ್ಮೆ ಬಿರುಗಾಳಿ ಏಳುತ್ತಾ?: ಗೌಡರ ಕುಟುಂಬದಿಂದ ಲೋಕಸಭೆಗೆ ಯಾರೂ ಸ್ಪರ್ಧಿಸಲ್ವಂತೆ?

ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

First Published Jun 23, 2023, 10:51 AM IST | Last Updated Jun 23, 2023, 10:51 AM IST

ಲೋಕಸಭಾ ಚುನಾವಣೆ ಹಿನ್ನೆಲೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಕುಟುಂಬ ರಾಜಕಾರಣ ಎಂಬ ಕಳಂಕದಿಂದ ಮುಕ್ತರಾಗಲು ಹೆಚ್‌ಡಿಕೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್‌.ಡಿ. ರೇವಣ್ಣ, ಭವಾನಿ ರೇವಣ್ಣ, ನಿಖಿಲ್‌ ಯಾರಿಗೂ ಟಿಕೆಟ್‌ ನೀಡಲು ನಿರ್ಧರಿಸಿದ್ದಾರಂತೆ. ದೂರದೃಷ್ಟಿಯ ಕಾರಣಕ್ಕೆ ಈ ನಿರ್ಧಾರ ಮಾಡುತ್ತಿದ್ದೇನೆ ಎಂದು ಹೇಳಿದ್ದಾರಂತೆ. ಆದ್ರೆ ಈ ನಿರ್ಧಾರಕ್ಕೆ ರೇವಣ್ಣ ಕುಟುಂಬ ಒಪ್ಪಿಕೊಳ್ಳುತ್ತಾ ಎಂಬುದೆ ದೊಡ್ಡ ಪ್ರಶ್ನೆಯಾಗಿದೆ. ಹಾಗಾದ್ರೆ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸುತ್ತಾರಾ ಹೆಚ್‌ಡಿಕೆ ಎಂಬ ಪ್ರಶ್ನೆ ಈಗ ಎಲ್ಲರಲ್ಲಿ ಮೂಡಿದೆ. 

ಇದನ್ನೂ ವೀಕ್ಷಿಸಿ: ಸರ್ಕಾರಿ ಸಂಸ್ಥೆಗಳಿಗೆ ಶಾಕ್‌ ಕೊಟ್ಟ ಬೆಸ್ಕಾಂ: ಕಟ್ಟಬೇಕಾದ ಬಿಲ್‌ ಎಷ್ಟು ಗೊತ್ತಾ?