
ಒಂದು ತಗೋಂಡ್ರೆ ಮತ್ತೊಂದು ಚಡ್ಡಿ ಉಚಿತ, ಕಾಂಗ್ರೆಸ್ ಫ್ರೀ ಭಾಗ್ಯಕ್ಕೆ ಹೆಚ್ಡಿಕೆ ಟಾಂಗ್!
ಒಂದು ಅವಕಾಶ ನೀಡಿ, ಒಕ್ಕಲಿಗ ಅಸ್ತ್ರ ಪ್ರಯೋಗಿಸಿದ ಡಿಕೆಶಿ, ಮೋದಿ ಉತ್ತರಾಧಿಕಾರಿ ಯಾರಾಗಬೇಕು?, ಈಗ ಲೋಕಸಭಾ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ?ದೆಹಲಿಗೆ ಕರೆಸಿ ಯತ್ನಾಳ್ಗೆ ಎಚ್ಚರಿಕೆ ನೀಡಿದ ಬಿಜೆಪಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಒಂದು ಚಡ್ಡಿ ತಗೊಂಡರೆ, ಇನ್ನೊಂದು ಚಡ್ಡಿ ಫ್ರಿ ಎಂದು ಕಾಂಗ್ರೆಸ್ ಇದೀಗ ಹೇಳುತ್ತಿದೆ. ಸಿಎಂ ಮನೆಯನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ರೆಡಿ ಇರಲಿಲ್ಲ. ಆಡಳಿತವನ್ನು ನಾನು ರಸ್ತೆಯಲ್ಲಿ ಮಾಡಬೇಕಿತ್ತಾ? ಎಂದು ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹಳೇ ಮೈಸೂರಿನಲ್ಲಿ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಹೆಚ್ಡಿಕೆ, ಹೊಟೆಲ್ನಲ್ಲಿ ಆಡಳಿತ ಮಾಡಿದರೆ ಆಗಲ್ಲ ಅನ್ನೋ ಟೀಕೆಗೆ, ನಾನು ಚಕ್ಕಂದ ಆಡಲು ಹೋಗಿದ್ನಾ? ಅಥವಾ ಸೂಟ್ಕೇಸ್ ಹಿಡ್ಕೊಂಡ್ ಹೊಟೆಲ್ಗೆ ಬರಲು ಹೇಳಿದ್ನಾ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಆರೋಪಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ. ಇದೀಗ ಸಿದ್ದರಾಮಯ್ಯ ಹಾಗೂ ಹೆಚ್ಡಿ ಕುಮಾರಸ್ವಾಮಿ ಟಾಕ್ ಫೈಟ್ ಭಾರಿ ಸಂಚಲನ ಸೃಷ್ಟಿಸುತ್ತಿದೆ.
Add Asianetnews Kannada as a Preferred Source
