Asianet Suvarna News Asianet Suvarna News

ಬಿಜೆಪಿಯವರು ಸಮಯ ಸಾಧಕರು: BSY ವಿರುದ್ಧ HDK ವಾಗ್ದಾಳಿ

*   ಬಿಜೆಪಿಗರು ಹೆಸರಿಗೆ ಮಾತ್ರ ಹಿಂದುತ್ವ ಅಂತಾರೆ
*   ದಲಿತರಿಗೇಕೆ ದೇವಸ್ಥಾನ ಪ್ರವೇಶಿಸಲು ಬಿಡಲ್ಲ?
*   ನಾವು ಹಿಂದುಗಳಲ್ವೇ, ನಾವು ಹಿಂದುತ್ವದ ಸಿದ್ಧಾಂತವನ್ನ ಇಟ್ಟುಕೊಂಡಿಲ್ವೇ? 
 

ವಿಜಯಪುರ(ಅ.21): ನಾವು ಹಿಂದುಗಳಲ್ವೇ, ನಾವು ಹಿಂದುತ್ವದ ಸಿದ್ಧಾಂತವನ್ನ ಇಟ್ಟುಕೊಂಡಿಲ್ವೇ?, ಅವರಬೊಬ್ಬರೇನಾ ಹಿಂದುತ್ವ ವಹಿಸಿರೋರು?. ಇಂದು ಹಿಂದುತ್ವದ ಹೆಸರಿನಲ್ಲಿ ಮತಗೋಸ್ಕರವಾಗಿ ರಾಜಕಾರಣ ಮಾಡುತ್ತಿದ್ದಾರೆ ಅಂತ ಹೇಳುವ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮತ್ತೋರ್ವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಬಿಜೆಪಿಗರು ಹೆಸರಿಗೆ ಮಾತ್ರ ಹಿಂದುತ್ವ ಅಂತಾರೆ. ದಲಿತರಿಗೇಕೆ ದೇವಸ್ಥಾನ ಪ್ರವೇಶಿಸಲು ಬಿಡಲ್ಲ ಅಂತ ಪ್ರಶ್ನಿಸಿದ್ದಾರೆ.  

ನನ್ನ ಬಗ್ಗೆ ಏನೇನು ಗೊತ್ತಿದೆ ಎಲ್ಲವನ್ನೂ ಹೇಳಿಬಿಡಲಿ: ಯತ್ನಾಳ್‌ಗೆ ಎಚ್‌ಡಿಕೆ ಸವಾಲು

Video Top Stories