Asianet Suvarna News Asianet Suvarna News

ಮೋದಿ ನಾಡಿಗೆ ಯೋಗಿ ಎಂಟ್ರಿ: ಕಮಲ ಅರಳಿಸಲು 'ತ್ರಿಶೂಲವ್ಯೂಹ'

ಪ್ರಧಾನಿ ನರೇಂದ್ರ ಮೋದಿ ನಾಡಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹವಾ ಶುರುವಾಗಿದ್ದು, ಕಮಲ ಅರಳಿಸೋಕೆ ತ್ರಿಶೂಲವ್ಯೂಹ ತಯಾರಾಗಿದೆ.
 

ಗುಜರಾತ್ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರಣತಂತ್ರ ರೂಪಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಎಂಟ್ರಿ ಕೊಟ್ಟಿದ್ದಾರೆ. 27 ವರ್ಷದ ಬಳಿಕ ಬಿಜೆಪಿಗೆ ಎದುರಾಗಿದೆಯಾ ಡಬಲ್ ಕಂಟಕ..? ಅದರ ಪರಿಹಾರ ಯಾಗವನ್ನೂ ಯೋಗಿಯೇ ನಡೆಸ್ತಾರಾ..? ಎಂಬ ಪ್ರಶ್ನೆ ಮೂಡಿದೆ. ಈಗ ಯೋಗಿ, ಆಮೇಲೆ ಮೋದಿ. ಹಾಗೂ ಅಮಿತ್ ಶಾ ಸೂತ್ರ ವರ್ಕ್ ಆದ್ರೆ ಎದುರಾಳಿಗಳ ಕತೆ ಫಿನಿಶ್ ಆದ ಹಾಗೇನಾ ಎಂಬ ಚರ್ಚೆ ಶುರುವಾಗಿದೆ.

Voters Data Theft Case: ಮತ ಮಾಹಿತಿ ಕದ್ದವರ ಬಂಧನಕ್ಕೆ ಡಿ.ಕೆ.ಶಿವಕುಮಾರ್‌ ಗಡುವು

Video Top Stories