Asianet Suvarna News Asianet Suvarna News

ಸಿಂದಗಿ ಬೈಎಲೆಕ್ಷನ್‌: ಕಾಂಗ್ರೆಸ್‌ ವಿರುದ್ಧ ದೇವೇಗೌಡ ವಾಗ್ದಾಳಿ

*  ದಿ. ಎಂ.ಸಿ. ಮನಗೂಳಿ ಅವರನ್ನ ರಾಜಕೀಯದಲ್ಲಿ ಬೆಳೆಸಿದ್ದೇ ನಾನು: ದೇವೇಗೌಡ
*  ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ ಅಶೋಕ್‌ ಮನಗೂಳಿ 
*  ಕಾಂಗ್ರೆಸ್‌ ವಿರುದ್ಧವೂ ಕಿಡಿಕಾರಿದ ದೇವೇಗೌಡ
 

ವಿಜಯಪುರ(ಅ.27): ಜಿಲ್ಲೆಯ ಸಿಂದಗಿ ಕ್ಷೇತ್ರದಲ್ಲಿ ದಿ. ಎಂ.ಸಿ. ಮನಗೂಳಿ ಅವರನ್ನ ರಾಜಕೀಯದಲ್ಲಿ ಬೆಳೆಸಿದ್ದೇ ನಾನು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. 1994 ರಲ್ಲಿ  ದಿ. ಮನಗೂಳಿ ಅವರಿಗೆ ಟಿಕೆಟ್‌ ಕೊಡೋ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಜೆ.ಎಚ್‌. ಪಟೇಲ್‌ ಸೇರಿದಂತೆ ಎಲ್ಲ ನಾಯಕರು ವಿರೋಧಿಸಿದ್ದರು. ಆದರೂ ನಾನು ಟಿಕೆಟ್‌ ಕೊಟ್ಟೆ ಗೆದ್ದು ಮಂತ್ರಿಯಾದರು. ಆದರೆ, ಇಂದು ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ ದಿ. ಮನಗೂಳಿ ಅವರ ಪುತ್ರ ಅಶೋಕ್‌ ಮನಗೂಳಿ ವಿರುದ್ಧ ದೊಡ್ಡಗೌಡರು ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ವಿರುದ್ಧವೂ ದೇವೇಗೌಡ ಕಿಡಿಕಾರಿದ್ದಾರೆ.

'ಕಂಬಳಿ ಹಾಕಲು ಕುರುಬರೇ ಆಗಬೇಕು ಅಂತಾದ್ರೆ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ

Video Top Stories