Asianet Suvarna News Asianet Suvarna News

ಬೆಳಗಾವಿ ಕಾಂಗ್ರೆಸ್‌ನಲ್ಲಿ ಭಿನ್ನಮತ; ಅಲ್ಪಸಂಖ್ಯಾತರ ಸಭೆಗೆ ಫಿರೋಜ್ ಸೇಠ್ ಗೈರು

ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಬೆಳಗಾವಿ ಕಾಂಗ್ರೆಸ್‌ನಲ್ಲೂ ಭಿನ್ನಮತ ವ್ಯಕ್ತವಾಗಿದೆ. ಅಲ್ಪಸಂಖ್ಯಾತ ಚಿಂತನಾ ಸಭೆಯಿಂದ ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧ್ಯಕ್ಷ ರಾಜು ಸೇಠ್ ಗೈರಾಗಿದ್ದಾರೆ. 

ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಬೆಳಗಾವಿ ಕಾಂಗ್ರೆಸ್‌ನಲ್ಲೂ ಭಿನ್ನಮತ ವ್ಯಕ್ತವಾಗಿದೆ. ಅಲ್ಪಸಂಖ್ಯಾತ ಚಿಂತನಾ ಸಭೆಯಿಂದ ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧ್ಯಕ್ಷ ರಾಜು ಸೇಠ್ ಗೈರಾಗಿದ್ದಾರೆ. 

ಪಕ್ಷದ ಸಂಘಟನೆಯಷ್ಟೇ ಚರ್ಚೆ ಮಾಡಿದ್ದೇನೆ: ಡಿಕೆಶಿ ತಿರುಗೇಟು

ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಚಿಂತನಾ ಸಭೆ ನಡೆದಿದೆ. ಶಾಸಕ ಜಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಈ ಸಭೆಗೆ ಫಿರೋಜ್ ಸೇಠ್, ರಾಜು ಸೇಠ್ ಗೈರಾಗಿದ್ದರು. ಇವರಿಗೆ ಆಹ್ವಾನವೂ ಇರಲಿಲ್ಲ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಹಾಗೂ ಫಿರೋಜ್ ಸೇಠ್ ನಡುವೆ ಭಿನ್ನಾಭಿಪ್ರಾಯವಿರುವುದು ಜಗಜ್ಜಾಹಿರಾಗಿದೆ. 

Video Top Stories