
ಸರ್ಕಾರಿ ಶಾಲೆ ಉಳಿಸಿ, ಬೆಳೆಸುವ ಕೆಲಸ ಆಗಬೇಕು: ಪ್ರಿಯಾಂಕ ಉಪೇಂದ್ರ
'ಮಿಸ್ ನಂದಿನಿ' ಚಿತ್ರ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ನೋಡಲು ಬಂದಿದ್ದೆ ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದರು.
ಸರ್ಕಾರಿ ಶಾಲೆ ಉಳಿಸುವ ಹಾಗೂ ಸಾಮಾಜಿಕ ಕಳಕಳಿಯಿರುವ 'ಮಿಸ್ ನಂದಿನಿ' ಚಿತ್ರವನ್ನು, ಮಕ್ಕಳಿಗೆ ನೋಡುವ ಅವಕಾಶ ಕಲ್ಪಿಸಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಮನವಿ ಮಾಡಿದ್ದೇನೆ ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದರು. ಸಿನಿಮಾದ ಆರಂಭದಲ್ಲಿ ಕಲೆಕ್ಷನ್ ಚೆನ್ನಾಗಿತ್ತು. ಈಗ ಥಿಯೇಟರ್ಗಳಲ್ಲಿ ಪ್ರದರ್ಶನ ಕಡಿಮೆ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಸಿನಿಮಾ ತೋರಿಸಿದ್ರೆ ಚೆನ್ನಾಗಿರುತ್ತೆ ಅಂತ ರಿಕ್ವೆಸ್ಟ್ ಮಾಡೋಕೆ ಬಂದಿದ್ದೆ ಎಂದರು. ತಮಿಳು, ತೆಲುಗುಗಳು ಸಿನಿಮಾ ಡಾಮಿನೇಟ್ ಆಗಿವೆ. ಅಟ್ಲೀಸ್ಟ್ ಒನ್ ಶೋ ಕೊಡಬಹುದು ಎಂದರು. ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಕೆಲಸ ಆಗಬೇಕು.ಸಾಮಾಜಿಕ ಕಳಕಳಿಯಿಂದ ಒಂದಷ್ಟು ಕನ್ನಡ ಸಿನಿಮಾ ಉಳಿಸುವ ರೂಲ್ಸ್ ಆಗಬೇಕು.ಕನ್ನಡ ಸಿನಿಮಾ ಉಳಿಸಲು ಸರ್ಕಾರ ಏನಾದರೂ ಕ್ರಮ ವಹಿಸಬೇಕು ಎಂದರು.
Add Asianetnews Kannada as a Preferred Source

ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಸಿಎಂ ಮಾಸ್ಟರ್ ಪ್ಲಾನ್: ರಾಜ್ಯಕ್ಕೆ ಬ ...