Asianet Suvarna News Asianet Suvarna News

ಅಬ್ಬಬ್ಬಾ... ಎಚ್‌ಡಿಕೆಗೆ ಸಿ.ಟಿ.ರವಿ ಮಾಡಿದ 'ಹೆಣ್ಣು, ನದಿ ಮತ್ತು ಸುದ್ದಿಯ' ಅದೆಂಥಾ ಪಾಠ!

  • ಹೆಣ್ಣು, ಸುದ್ದಿ ಮತ್ತು ನದಿ ಮೂಲ ಹುಡುಕೋ ಪ್ರಯತ್ನ ಬೇಡ
  • ಅಧಿಕೃತ ಸುದ್ದಿಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ
  • ಮಾಜಿ ಸಿಎಂ ಎಚ್‌ಡಿಕೆಗೆ ಸಚಿವ ಸಿ.ಟಿ.ರವಿ ಪಾಠ

ಬೆಂಗಳೂರು (ಅ.04): ಸಚಿವ ಸಿ.ಟಿ. ರವಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರಿಗೆ 'ಮಾಧ್ಯಮ' ಪಾಠ ಮಾಡಿದ್ದಾರೆ. ರಾಜಕೀಯದಲ್ಲಿ ಪಳಗಿರುವ ಎಚ್‌ಡಿಕೆಗೆ, ಅಧಿಕೃತ ಸುದ್ದಿಗಳ ಬಗ್ಗೆ  ಮಾತ್ರ ತಲೆಕೆಡಿಸಿಕೊಳ್ಳುವಂತೆ ಸಚಿವ ರವಿ ಕಿವಿಮಾತು ಹೇಳಿದ್ದಾರೆ.

ಇದನ್ನೂ ನೋಡಿ | ಡ್ರಗ್ಸ್ ಕೇಸ್: ಅನುಶ್ರೀ-ಮಾಜಿ ಸಿಎಂ ಕಾಲ್ ರಹಸ್ಯ, ಕುಮಾರಣ್ಣಗೆ ಸಿಟ್ಯಾಕೆ..? ಸಿಡುಕ್ಯಾಕೆ..?...

ನಟಿ-ನಿರೂಪಕಿ ಅನುಶ್ರೀ ವಿಚಾರಣೆಯಲ್ಲಿ ಒಬ್ಬ ಮಾಜಿ ಸಿಎಂ ಮತ್ತು ಅವರ ಪುತ್ರನ ಬಗ್ಗೆ ಸುದ್ದಿಯಾಗಿತ್ತು. ಎಚ್‌ಡಿಕೆ ಹೆಸರು ಎಲ್ಲೂ ಪ್ರಸ್ತಾಪ ಆಗದೇ ಇದ್ದರೂ ಅವರು ಮಾಧ್ಯಮಗಳ ವಿರುದ್ಧ ಗರಂ ಆಗಿದ್ದರು. 

Video Top Stories