Asianet Suvarna News Asianet Suvarna News

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರದಾನ ಆಗುತ್ತಾ ಹಿಜಾಬ್‌ ವಿವಾದ?

ರಾಜ್ಯದಲ್ಲಿ ಭುಗಿಲೆದ್ದಿದ್ದ ಹಿಜಾಬ್‌ ವಿವಾದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕೈ ಹಿಡಿಯುತ್ತಾ ಎಂಬ ಚರ್ಚೆ ಶುರುವಾಗಿದೆ.

ಉಡುಪಿಯಲ್ಲಿ ಕಳೆದ ವರ್ಷ ಜನವರಿಯಲ್ಲಿ ಹಿಜಾಬ್‌ ಗಲಾಟೆ ನಡೆದಿತ್ತು. ಹಿಜಾಬ್‌ ನಮ್ಮ ಹಕ್ಕು ಎಂದು ಆರು ವಿದ್ಯಾರ್ಥಿನಿಯರು ಹೋರಾಡಿದ್ದರು. ಉಡುಪಿಯಲ್ಲಿ ಆರಂಭವಾದ ಹಿಜಾಬ್‌ ವಿಶ್ವಾದ್ಯಂತ ಸದ್ದು ಮಾಡಿತ್ತು. ವಿವಾದದ ಮೂಲಕ ಶಾಸಕ ರಘುಪತಿ ಭಟ್‌ ಗಮನ ಸೆಳೆದಿದ್ದರು. ಬಿಜೆಪಿಗೆ ಮೈಲೇಜ್‌ ಕೊಟ್ಟ ವಿವಾದ, ಇದೀಗ ರಘುಪತಿ ಭಟ್‌ಗೆ ನೆರವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಹಾಗೂ ಎದುರಾಳಿಯಾಗಿದ್ದ ಪ್ರಮೋದ್‌ ಮಧ್ವರಾಜ್‌  ಕೂಡಾ ಬಿಜೆಪಿ ಸೇರ್ಪಡೆಯಾಗಿದ್ದು, ಚುನಾವಣೆಯಲ್ಲಿ ಬಿಜೆಪಿಗೆ ವರದಾನ ಆಗಲಿದೆ ಎನ್ನಲಾಗುತ್ತಿದೆ.

ಕೆಸಿಆರ್‌ನಿಂದ 500 ಕೋಟಿ ಆಫರ್ ಆರೋಪ: ಶಾಸಕ ಜಮೀರ್‌ ಖಾನ್ ಹೇಳಿದ್ದೇನು?