Asianet Suvarna News Asianet Suvarna News

ಕೆಸಿಆರ್‌ನಿಂದ 500 ಕೋಟಿ ಆಫರ್ ಆರೋಪ: ಶಾಸಕ ಜಮೀರ್‌ ಖಾನ್ ಹೇಳಿದ್ದೇನು?

ತೆಲಂಗಾಣ ಸಿಎಂ ಕೆಸಿಆರ್ ಭೇಟಿಯಾಗಿದ್ದು ನಿಜ, ಆದ್ರೆ ನನಗೆ ಯಾವುದೇ ಆಫರ್‌ ಬಂದಿಲ್ಲ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
 

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ 500 ಕೋಟಿ ಆಫರ್‌ ವಿಚಾರವಾಗಿ ಮೈಸೂರಿನಲ್ಲಿ ಶಾಸಕ ಜಮೀರ್‌ ಅಹ್ಮದ್‌ ಸ್ಪಷ್ಟನೆ ನೀಡಿದ್ದಾರೆ. 500 ಕೋಟಿ ಆಫರ್‌ ಬಗ್ಗೆ ಗೊತ್ತಿಲ್ಲ, KCR  ಭೇಟಿ ವೇಳೆ ರಾಜಕೀಯ ಬಗ್ಗೆ ಚರ್ಚಿಸಿಲ್ಲ ಎಂದು ತಿಳಿಸಿದ್ದಾರೆ. ತಾಂಡೂರು ಶಾಸಕ ರೋಹಿತ್‌ ರೆಡ್ಡಿ ನನ್ನ ಸ್ನೇಹಿತ. ಕೆಸಿಆರ್‌  ಭೇಟಿಯಾಗುವಂತೆ ರೋಹಿತ್‌ ಹೇಳಿದ್ರು ಎಂದರು. KCR ಬೇರೆ, ಪಕ್ಷಕ್ಕೂ ನಮಗೂ ಅವರಿಗೂ ಸಂಬಂಧ ಇಲ್ಲ ಎಂದರು.