ಪ್ರಲ್ಹಾದ್ ಜೋಶಿ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗ? ಪ್ರದೀಪ್ ಶೆಟ್ಟರ್ ಹೇಳಿಕೆ ಹಿಂದಿದ್ಯಾ ಹೊಸ ಗೇಮ್ ಪ್ಲಾನ್?

ಜೋಶಿಗೆ ಪೈಪೋಟಿ ಒಡ್ಡಲು ಲಿಂಗಾಯತ ಅಭ್ಯರ್ಥಿಗೆ ಟಿಕೆಟ್?
ಲೋಕಸಭಾ ಚುನಾವಣೆ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ ಪ್ರದೀಪ್
ಧಾರವಾಡದಿಂದ ಸತತ 4 ಬಾರಿ ಗೆದ್ದು ಸಂಸದರಾಗಿರುವ ಜೋಶಿ

Share this Video
  • FB
  • Linkdin
  • Whatsapp

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಲೆಕ್ಕಾಚಾರ ನಡೆಯುತ್ತಿದ್ದು, ಪ್ರಲ್ಹಾದ್ ಜೋಶಿ(Pralhad Joshi) ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗ ಮಾಡಲು ಕಾಂಗ್ರೆಸ್‌(Congress) ಮುಂದಾಗಿದೆ. ಜೋಶಿಗೆ ಪೈಪೋಟಿ ಒಡ್ಡಲು ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ಕೊಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಪ್ರದೀಪ್ ಶೆಟ್ಟರ್(Pradeep Shettar) ಹೇಳಿಕೆ ಹಿಂದಿದ್ಯಾ ಹೊಸ ಗೇಮ್ ಪ್ಲಾನ್ ಎಂಬ ಪ್ರಶ್ನೆ ಕಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ(Loksabha election) ಸ್ಪರ್ಧಿಸುವ ಇಂಗಿತವನ್ನು ಪ್ರದೀಪ್‌ ಶೆಟ್ಟರ್‌ ವ್ಯಕ್ತಪಡಿಸಿದ್ದಾರೆ. ಧಾರವಾಡದಿಂದ ಸತತ 4 ಬಾರಿ ಗೆದ್ದು ಸಂಸದರಾಗಿರುವ ಜೋಶಿ, ಅಣ್ಣನ ಹಾದಿ ತುಳಿಯಲಿದ್ದಾರಾ ತಮ್ಮ ಪ್ರದೀಪ್ ಶೆಟ್ಟರ್? ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರಾ ಪ್ರದೀಪ್ ಶೆಟ್ಟರ್? ಜೋಶಿ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ ಪ್ರದೀಪ್? ಲಿಂಗಾಯತ ಅಸ್ತ್ರ ದಾಳ‌ ಉರುಳಿಸಲು ಮುಂದಾದ ಪ್ರದೀಪ್ ಶೆಟ್ಟರ್. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: 105 ದಿನ..7ನೇ ಸೀಸನ್..! ತೆಲುಗು ಬಿಗ್‌ಬಾಸ್ ಅಂತ್ಯ..!

Related Video