
ಬೆಂಗಳೂರು ಉತ್ತರಕ್ಕೆ ಬರ್ತಾರಾ ಡಿ.ಕೆ ಸುರೇಶ್..? ಶಾಸಕರ ಘರ್ ವಾಪ್ಸಿ ಹಿಂದೆ ಡಿಕೆ ಬ್ರದರ್ಸ್ ಮಾಸ್ಟರ್ ಪ್ಲಾನ್..?
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆಗೆ ಸಿದ್ಧತೆ
ಈ ಭಾಗದಲ್ಲಿನ ಶಾಸಕರನ್ನು ಸೆಳೆಯಲು ಈಗಿನಿಂದಲೇ ಕಸರತ್ತು
ಎಸ್.ಟಿ ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ್
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಗುಡ್ ಬೈ ಹೇಳಿ, ಉತ್ತರಕ್ಕೆ ಡಿ.ಕೆ. ಸುರೇಶ್(DK Suresh) ಬರ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಶಾಸಕರ ಘರ್ ವಾಪ್ಸಿ ಹಿಂದೆ ಡಿಕೆ ಬ್ರದರ್ಸ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರಲ್ಲಿ(Bengaluru) ಕಾಂಗ್ರೆಸ್ ಬಲವರ್ದನೆಗೆ ಡಿ.ಕೆ. ಸುರೇಶ್ ದಾಳ ಹಾಕಿದ್ದು, ಬಿಜೆಪಿ(BJp) ಹಣಿಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದೇ ಕಾರಣಕ್ಕೆ ಬೆಂಗಳೂರು ಉತ್ತರದ ಶಾಕರಿಗೆ ಡಿ.ಕೆ ಬ್ರದರ್ಸ್ ಗಾಳ ಎಂದು ಹೇಳಲಾಗ್ತಿದೆ. ಎಸ್.ಟಿ ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ್ ಮೂವರು ಶಾಸಕರನ್ನು ಸೆಳೆಯಲು ಡಿಕೆ ಬ್ರದರ್ಸ್ ಗಂಭೀರ ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ನಿಂತಿರುವುದೇ ಬ್ರಾಹ್ಮಣರು, ಒಕ್ಕಲಿಗರ ವೋಟಿನಿಂದ. ಹಾಗಾಗಿ ಅವರನ್ನು ಸೆಳೆಯಲು ಯತ್ನ ನಡೆಸಲಾಗುತ್ತಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಶಾಸಕರ ಘರ್ ವಾಪ್ಸಿ ಜೊತೆ ಕಾರ್ಪೊರೇಟರ್ಗಳೂ ಕಾಂಗ್ರೆಸ್ ತೆಕ್ಕೆಗೆ..? ಲೋಕಲ್ ರಾಜಕಾರಣದಲ್ಲಿ ಸಂಚಲನ !