Asianet Suvarna News Asianet Suvarna News

ಸಚಿವ ಮುನಿರತ್ನ ಆಸ್ತಿ ಮೂಲಕ್ಕೆ ಕೈ ಹಾಕಿದ ಕೆಂಪಣ್ಣ: ಮುಂದುವರೆದ ಜಟಾಪಟಿ

ಸಚಿವ ಮುನಿರತ್ನ ಹಾಗೂ ಗುತ್ತಿಗೆದಾರರ ಮಧ್ಯೆ ಜಟಾಪಟಿ ನಡೆದಿದ್ದು, ಸಚಿವ ಮುನಿರತ್ನ ವಿರುದ್ಧ ಗುತ್ತಿಗೆದಾರರ ಸಂಘ ಸಮರ ಸಾರಿದೆ.

ಸಚಿವ ಮುನಿರತ್ನ ಆಸ್ತಿ ಮೂಲಕ್ಕೆ ಗುತ್ತಿಗೆದಾರ ಕೆಂಪಣ್ಣ ಕೈ ಹಾಕಿದ್ದಾರೆ. ಸಚಿವ ಮುನಿರತ್ನ ಆಸ್ತಿ ವಿವರ ಕುರಿತು  ಲೋಕಾಯುಕ್ತಕ್ಕೆ ಆರ್ ಟಿಐ ನಡಿ ಅರ್ಜಿ ಸಲ್ಲಿಸಿದ್ದಾರೆ. ಕೆಂಪಣ್ಣ ಪರ ಹಿರಿಯ ವಕೀಲ ಧನಂಜಯ್‌ ಅರ್ಜಿ ಸಲ್ಲಿಸಿದ್ದಾರೆ. ಸಚಿವ ಮುನಿರತ್ನ ಅವರು ಕೆಂಪಣ್ಣ ಮೇಲೆ ಮಾನನಷ್ಟ ಹೂಡಿದ್ದರು, ಆದ್ರೆ  ಇದೀಗ ಕೆಂಪಣ್ಣ ಮುನಿರತ್ನ ಆಸ್ತಿ ವಿವರ ಕೋರಿದ್ದಾರೆ. ಇಬ್ಬರ ನಡುವೆ ಜಟಾಪಟಿ ಮುಂದುವರೆದಿದೆ.