Asianet Suvarna News Asianet Suvarna News

ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದೇಕೆ ಬಿಜೆಪಿ..? ಸುಸೂತ್ರವಾಗಿ ಟಿಕೆಟ್‌ ಪ್ರಕ್ರಿಯೆ ನಡೆಯುತ್ತಿಲ್ಲ ಏಕೆ..?

ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಪದೇ ಪದೇ ತಪ್ಪು ಹೆಜ್ಜೆ
ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದೇಕೆ ಬಿಜೆಪಿ..?
ಬಿಜೆಪಿ ಕೆಲ ನಾಯಕರ ನಡೆಯಿಂದ ಕಾರ್ಯಕರ್ತರಲ್ಲಿ ಗೊಂದಲ

ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ(BJP) ಪದೇ ಪದೇ ತಪ್ಪು ಹೆಜ್ಜೆ ಇಡುತ್ತಿರುವಂತೆ ಕಾಣುತ್ತಿದೆ. ಈ ಮೂಲಕ ಪದೇ ಪದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಇದರಿಂದ ಬಿಜೆಪಿ ಕೆಲ ನಾಯಕರ ನಡೆಯಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ರಾಜ್ಯ ಬಿಜೆಪಿಯಲ್ಲಿ ಟಿಕೆಟ್(Ticket) ಸಂಬಂಧ ಆಂತರಿಕ ಸಮಸ್ಯೆ ಇದ್ದು, ಸುಸೂತ್ರವಾಗಿ ಪ್ರಕ್ರಿಯೆ ನಡೆಯುತ್ತಿಲ್ಲ. ಬಿಜೆಪಿಯಲ್ಲಿ ಸದಾ ಸಮಸ್ಯೆ ಉದ್ಭವವಾಗೋದು ಏಕೆ ಎಂಬ ಪ್ರಶ್ನೆ ಸಹ ಕಾಡುತ್ತಿದೆ. ಈ ಹಿಂದೆಯೂ ಟಿಕೆಟ್ ಕೊಡುವ ವಿಚಾರದಲ್ಲಿ ಹಲವು ಬಾರಿ ಬಿಜೆಪಿ ತಪ್ಪು ಎಸಗಿದೆ. ಪ್ರಮುಖ ಕಾಲಘಟ್ಟದಲ್ಲೇ ಪ್ರಭಾವಿಗಳನ್ನು ತಿರಸ್ಕರಿಸಿದ್ದ  ಬಿಜೆಪಿ ನಾಯಕರು. ತಪ್ಪು ಮಾಡಿದ್ದಕ್ಕೆ ಪ್ರಮುಖ ಕ್ಷೇತ್ರಗಳನ್ನು ಕಳೆದುಕೊಂಡಿರುವ ಬಿಜೆಪಿ.

ಇದನ್ನೂ ವೀಕ್ಷಿಸಿ:  ಜೋರಾಯ್ತು ಲೋಕಸಭೆ ಟಿಕೆಟ್ ಹಂಚಿಕೆ ಕಸರತ್ತು..? ಸಿಇಸಿ ಮೀಟಿಂಗ್‌ನಲ್ಲಿ ಏನೇನು ಚರ್ಚೆ..?

Video Top Stories